ಮೂರ್ಜೆ ಅಂಗನವಾಡಿಯ ಅವರಣ ಗೋಡೆ ಕುಸಿತ: ಹಾನಿ
ಬಂಟ್ವಾಳ, ಆ. 8: ತಾಲೂಕಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಅಂಗನವಾಡಿ ಕೇಂದ್ರದ ಅವರಣ ಗೋಡೆಯು ಬುಧವಾರ ಕುಸಿದು ಬಿದ್ದು ಹಾನಿ ಸಂಭವಿಸಿದ್ದು, ಅಂಗನವಾಡಿ ಕಟ್ಟಡ ಅಪಾಯದಲ್ಲಿದೆ.
ಆವರಣ ಗೋಡೆ ಜರಿದ ಪರಿಣಾಮ ಅಂಗನವಾಡಿ ಕೇಂದ್ರದ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಇಲ್ಲಿನ ಮಕ್ಕಳನ್ನು ಹತ್ತಿರದ ಶಾಲಾ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸಿಡಿಪಿಒ ಇಲಾಖೆಯ ಸಿಬ್ಬಂದಿ ಸಿಂಧು ಅವರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪಿಲಾತಬೆಟ್ಟು ಸಹಕಾರಿ ಬ್ಯಾಂಕ್ನ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಂ ಸದಸ್ಯರು ಭೇಟಿ ನೀಡಿದರು.
ಇಲ್ಲಿನ ಸಮೀಪದ ಖಾಸಗಿ ಜಾಗದ ವ್ಯಕ್ತಿಯೊಬ್ಬರು ಮಣ್ಣು ತೆಗೆದ ಕಾರಣ ಕೇಂದ್ರದ ಆವರಣಗೋಡೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Next Story