ಹದಗೆಟ್ಟ ಸುರತ್ಕಲ್ ಕಾನ ರಸ್ತೆ: ದುರಸ್ತಿಗೆ ಎಸ್ಡಿಪಿಐ ಆಗ್ರಹ
ಮಂಗಳೂರು, ಆ.8: ಸುರತ್ಕಲ್ ಕಾನ ರಸ್ತೆ ಹದಗೆಟ್ಟಿದ್ದು ಶೀಘ್ರದಲ್ಲಿ ದುರಸ್ತಿಗೊಳಿಸಲು ಆಗ್ರಹಿಸಿ ಎಸ್ಡಿಪಿಐ ಸುರತ್ಕಲ್ ವಾರ್ಡ್ ಸಮಿತಿಯಿಂದ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ನಾಯಕರು ದುರಸ್ತಿಗಾಗಿ 15 ದಿನಗಳ ಕಾಲಾವಕಾಶ ನೀಡಿದ್ದು, ತಪ್ಪಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಬ್ರಹತ್ ಕಾಲ್ನಡಿಗಾ ಜಾಥಾ ಮತ್ತು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ವಾರ್ಡ್ ಮಿತಿಯ ಅಧ್ಯಕ್ಷ ಸಲಾಂ ಕಾನ, ಕಾರ್ಯದರ್ಶಿ ಖಾದರ್ ಕಾನ, ವಾರ್ಡ್ಅಧ್ಯಕ್ಷ ಇರ್ಫಾನ್, ಸಮೀರ್, ಬಶೀರ್ ಹಾಗೂ ಎಸ್ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಝರ್ ಚೊಕ್ಕಬೆಟ್ಟು ಉಪಸ್ಥಿತರಿದ್ದರು.
Next Story