ಆ.10: ತುಳು ಚಲನಚಿತ್ರ 'ಪತ್ತೀಸ್ ಗ್ಯಾಂಗ್' ತೆರೆಗೆ
ಮಂಗಳೂರು, ಆ. 8: ತುಳು ರಂಗ ಭೂಮಿ ಕಲಾವಿದ ದಿ. ಆನಂದ ಬೋಳಾರ ಅವರ ಸ್ಮರಣಾರ್ಥ ಇನ್ ಬಾಕ್ಸ್ ಕ್ರೀಯೇಶನ್ ವತಿಯಿಂದ ಪತ್ತೀಸ್ ಗ್ಯಾಂಗ್ ಎಂಬ ತುಳು ಸಿನಿಮಾ ಈಗಾಗಲೆ ಸಿದ್ದಗೊಂಡಿದೆ.ಆ. 10ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಈ ಚಲನಚಿತ್ರ ಬಿಡುಗಡೆ ಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಸೂರಜ್ ಬೋಳಾರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಮ್ಮ ಸುತ್ತ ಮುತ್ತ ನಡೆಯುವ ಸತ್ಯಘಟನೆಗಳನ್ನು ಆಧರಿಸಿ ಈ ಚಲನಚಿತ್ರವನ್ನು ನಿರ್ಮಿಸಲಾಗಿದೆ.ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರವನ್ನು ಪಡೆದಿರುತ್ತದೆ ಎಂದು ಸೂರಜ್ ಬೋಳಾರ ತಿಳಿಸಿದ್ದಾರೆ.ಚಿತ್ರತಂಡದಲ್ಲಿ ಬಹುತೇಕ ಯುವ ಕಲಾವಿದರು ಒಳಗೊಂಡಿದ್ದಾರೆ.ಪಡ್ಡಾಯಿ ಚಿತ್ರದ ಕಲಾವಿದರು ಸೇರಿದಂತೆ ತುಳು ಚಿತ್ರರಂಗದ ಹಿರಿಯ ನಟರು ನಿರ್ದೇಶಕರು ಬೆಂಬಲ ನೀಡಿದ್ದಾರೆ ಎಂದು ಸೂರಜ್ ಬೋಳಾರ್ ತಿಳಿಸಿದ್ದಾರೆ.
ತುಳು ಚಲನಚಿತ್ರವನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ನಿಟ್ಟಿನಲ್ಲಿ ಪತ್ತೀಸ್ ಗ್ಯಾಂಗ್ ಚಿತ್ರದ ಮೂಲಕ ಪ್ರಯತ್ನ ನಡೆದಿದೆ ಎಂದು ಚಿತ್ರದ ಕಲಾವಿದರಾಗಿರುವ ಚಂದ್ರಹಾಸ ಉಳ್ಳಾಲ ತಿಳಿಸಿದ್ದಾರೆ.ಚಿತ್ರದ ನಿರ್ಮಾಪಕ ಮನೋಜ್ ಗರಡಿ ಮಾತನಾಡುತ್ತಾ ತುಳು ನಾಡಿನ ನೈಜ ಘಟನೆಗಳ ಸುತ್ತ ಉತ್ತಮ ಸಂಗೀತ ದೊಂದಿಗೆ ಚಲನಚಿತ್ರ ಮೂಡಿ ಬಂದಿದೆ ಎಂದು ಮನೋಜ್ ಕುಮಾರ್ ಗರೋಡಿ ತಿಳಿಸಿದ್ದಾರೆ.
ಚಿತ್ರದ ನಿರ್ಮಾಣ ತಂಡದಲ್ಲಿ ಮಣಿ ಕಾಂತ ಕದ್ರಿ ,ಮೈತ್ರಿ ಐಯಾರ್ ಸಂಗೀತ ನಿರ್ದೇಶಿಸಿದ್ದಾರೆ, ಕಲಾವಿದರಾದ ಮೋಹನ್ ಶೇಣಿ,ವಿಸ್ಮಯ ವಿನಾಯಕ, ಅಜಯ ರಾಜ್, ನವ್ಯತಾ ರೈ, ಚಂದ್ರಹಾಸ ಉಳ್ಳಾಲ, ಅರವಿಂದ ಬೋಳಾರ, ವಿಜಯ ಕುಮಾರ್ ಕೊಡಿಯಾಲ ಬೈಲ್, ಕಿಶೋರ್ ಡಿ.ಶೆಟ್ಟಿ, ವಿಶ್ವ ನಾಥ ಅಸೈಗೋಳಿ, ಅವಿನಾಶ್ ರೈ, ರಾಜೀಶ್ ಕುಡ್ಲಾ ನಿರ್ಮಾಣ ಮಾಡಿದ್ದಾರೆ. ಸೂರಜ್ ಬೋಳಾರ್ ಜೊತೆ ಪ್ರೀತಂ ಎಂ.ಎನ್ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಸೂರಜ್ ತಿಳಿಸಿದ್ದಾರೆ.