ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಗರಸಭೆಗೆ 500 ಕೋಟಿ ರೂ.ಅನುದಾನ: ಪ್ರಮೋದ್
ಉಡುಪಿ, ಆ.9: ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ ಉಡುಪಿ ನಗರಸಭೆಗೆ 500 ಕೋಟಿ ರೂ.ಗೂ ಅಧಿಕ ಅನುದಾನ ಕಳೆದ ಐದು ವರ್ಷ ಗಳಲ್ಲಿ ಮಂಜೂರಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೂರಾರು ಕೋಟಿ ರೂ. ಯೋಜನೆ ಗಳು ಉಡುಪಿ ನಗರದಲ್ಲಿ ಅನುಷ್ಠಾನಗೊಂಡಿವೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕೊಳ, ವಡಭಾಂಡೇಶ್ವರ, ಮಲ್ಪೆಸೆಂಟ್ರಲ್, ಸುಬ್ರಹ್ಮಣ್ಯನಗರ, ಕೊಡಂಕೂರು, ಗೋಪಾಲಪುರ ಮೊದಲಾದ ವಾರ್ಡ್ಗಳಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಕೊಳ, ವಡಾಂಡೇಶ್ವರ,ಮಲ್ಪೆಸೆಂಟ್ರಲ್,ಸುಬ್ರಹ್ಮಣ್ಯನಗರ,ಕೊಡಂಕೂರು,ಗೋಪಾಲಪುರಮೊದಲಾದವಾರ್ಡ್ಗಳಲ್ಲಿನಡೆದಪಕ್ಷದಕಾರ್ಯಕರ್ತರಸೆಯಲ್ಲಿ ಅವರು ಮಾತನಾಡುತಿದ್ದರು. ಅನುದಾನ ತರಲು ಅವಿರತ ಶ್ರಮವಹಿಸಿದ್ದೇನೆ. ಅನುದಾನದಲ್ಲಿ ಹಲವು ಕಾಮಗಾರಿಗಳು, ರಸ್ತೆ, ಸೇತುವೆ, ಕುಡಿಯುವ ನೀರು, ಉದ್ಯಾನವನ ಮೊದಲಾದ ಯೋಜನೆಗಳು ಅನುಷ್ಠಾನಗೊಂಡಿವೆ. ನಗರೋತ್ಥಾನದ 35 ಕೋಟಿ ರೂ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದು ನಿರ್ಮಾಣ ಹಂತದಲ್ಲಿವೆ ಎಂದರು.
ತನ್ನ ಐದು ವರ್ಷಗಳ ಶಾಸಕ ಅವಧಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ 24 ಗಂಟೆ ನಿರಂತರ ವಿದ್ಯುತ್-ತಾಂತ್ರಿಕ ತೊಂದರೆ ಹೊರತುಪಡಿಸಿ-ನೀಡುವಲ್ಲಿ ಯಶಸ್ವಿಯಾಗಿದ್ದೇನೆ. ಇನ್ನೊಂದು ಶಾಶ್ವತ ಕುಡಿಯುವ ನೀರಿನ ಯೋಜನೆ ವರಾಹಿ ಕುಡಿಯುವ ನೀರು ಹಾಗೂ ಒಳಚರಂಡಿ ಜಾಲ ಪುನಶ್ಚೇತನಕ್ಕೆ 338 ಕೋಟಿ ರೂ.ವುಂಜೂರಾಗಿದೆ ಎಂದವರು ವಿವರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇರುವುದರಿಂದ ಬಿಡುಗಡೆಗೊಂಡ ಅನುದಾನಗಳ ಕಾಮಗಾರಿ ಸಾಂಗವಾಗಿ ನೆರವೇರಲು ಹಾಗೂ ಅನುಷ್ಠಾನಗೊಳ್ಳಲು ಉಡುಪಿ ನಗರಸಭೆಯಲ್ಲಿ ಇನ್ನೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಪ್ರಮೋದ್ ಮಧ್ವಾಜ್ ಕಾರ್ಯಕರ್ತರಿಗೆ ಕರೆಕೊಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇರುವುದರಿಂದ ಬಿಡುಗಡೆಗೊಂಡ ಅನುದಾನಗಳ ಕಾಮಗಾರಿ ಸಾಂಗವಾಗಿ ನೆರವೇರಲು ಹಾಗೂ ಅನುಷ್ಠಾನಗೊಳ್ಳಲು ಉಡುಪಿ
ನಗರಸೆಯಲ್ಲಿಇನ್ನೊಮ್ಮೆಕಾಂಗ್ರೆಸ್ಪಕ್ಷಅಧಿಕಾರಕ್ಕೆಬರುವಂತೆಪಕ್ಷದಕಾರ್ಯಕರ್ತರುಒಗ್ಗಟ್ಟಿನಲ್ಲಿಪ್ರಾಮಾಣಿಕವಾಗಿಶ್ರಮಿಸುವಂತೆಪ್ರಮೋದ್ಮ್ವರಾಜ್ ಕಾರ್ಯಕರ್ತರಿಗೆ ಕರೆಕೊಟ್ಟರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾದವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಗಣೇಶ್ ನೆರ್ಗಿ, ನಾರಾಯಣ್ ಕುಂದರ್, ಶೇಖರ್ ಜಿ. ಕೋಟ್ಯಾನ್, ಜನಾರ್ದನ ಭಂಡಾರ್ಕರ್, ಯುವರಾಜ್, ಜಾನಕಿ ಗಣಪತಿ ಶೆಟ್ಟಿಗಾರ್, ಜಯಾನಂದ, ಕೇಶವ ಎಂ. ಕೋಟ್ಯಾನ್, ಪ್ರಶಾಂತ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.