ವಾಲ್ಪಾಡಿ: ಎಸ್ಕೆಎಸ್ಬಿವಿ ಮಹಾಸಭೆ
ಮೂಡುಬಿದಿರೆ, ಆ.10: ಎಸ್ಕೆಎಸ್ಬಿವಿ ವಾಲ್ಪಾಡಿ ಶಾಖೆಯ ಮಹಾಸಭೆಯು ಇತ್ತೀಚೆಗೆ ನಡೆಯಿತು. ವಾಲ್ಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2018-19ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಅಲ್ತಾಫ್ ದಾರಿಮಿ, ಗೌರವ ಸಲಹೆಗಾರರಾಗಿ ಅಬ್ದುಲ್ ರಶೀದ್ ಹನೀಫಿ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್, ಅಧ್ಯಕ್ಷರಾಗಿ ಮುಹಮ್ಮದ್ ಸೈಫುದ್ದೀನ್, ಉಪಾಧ್ಯಕ್ಷರಾಗಿ ಮುಹಮ್ಮದ್ ಹಫೀಝ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉವೈಸ್, ಜೊತೆ ಕಾರ್ಯದರ್ಶಿಯಾಗಿ ಮಬ್ರೂಕ್ ಅಲಿ, ಖಜಾಂಚಿಯಾಗಿ ಮುಹಮ್ಮದ್ ಮುಸ್ತಫ ಹಾಗೂ ಉಳಿದವರು ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾದರು.
ಸನ್ಮಾನ: ‘ನಮ್ಮ ಬೆದ್ರ’ ವಾರಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ ಹಾಗೂ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಅವರನ್ನು ಎಸ್ಕೆಎಸ್ಬಿವಿ ವತಿಯಿಂದ ಸನ್ಮಾನಿಸಲಾಯಿತು.
ಲೈಬ್ರೆರಿ ಉದ್ಘಾಟನೆ: ಎಸ್ಕೆಎಸ್ಬಿವಿ ವತಿಯಿಂದ ಬೃಹತ್ ಗ್ರಂಥಾಲಯವನ್ನು ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಅಹ್ಮದ್ ಹುಸೈನ್ ಉದ್ಘಾಟಿಸಿದರು.