ಶಿರೂರುಶ್ರೀಗಳ ಸ್ಮರಣಾರ್ಥ ಹುಲಿವೇಷ ಸ್ಪರ್ಧೆ
ಉಡುಪಿ, ಆ.10: ಇತ್ತೀಚೆಗೆ ನಿಧನರಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀ ಸ್ಮರಣಾರ್ಥ, ಶ್ರೀಕೃಷ್ಣಾಷ್ಟಮಿ-ವಿಟ್ಲಪಿಂಡಿಯ ಪ್ರಯುಕ್ತ ಹುಲಿ ವೇಷ ಸ್ಪರ್ಧೆಯೊಂದನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಸ್ಪರ್ಧೆಯ ಕುರಿತಂತೆ ಆ.11ರ ಸಂಜೆ 5 ಗಂಟೆಗೆ ಸಮಾಲೋಚನಾ ಸಭೆಯನ್ನು ರಾಜಾಂಗಣದ ಪಾರ್ಕಿಂಗ್ ಬಳಿ ಇರುವ ಮಥುರಾ ಛತ್ರದ ಹಾಲ್ನಲ್ಲಿ ಕರೆಯಲಾಗಿದೆ. ಆಸಕ್ತರು, ಶಿರೂರುಶ್ರೀಗಳ ಅಭಿಮಾನಿಗಳು ಭಾಗವಹಿಸುವಂತೆ ಕೋರಲಾಗಿದೆ.
Next Story