ತೊಕ್ಕೊಟ್ಟು: ಖಾಸಗಿ - ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ
15 ಮಂದಿಗೆ ಗಾಯ
ತೊಕ್ಕೊಟ್ಟು, ಆ. 11: ಕೊಲ್ಯ ಅಡ್ಕ ಬಳಿ ಖಾಸಗಿ ಬಸ್ ಮತ್ತು ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದೆ. ಅಪಘಾತದಿಂದ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಅಡ್ಕ ಬಳಿ ಅಪಘಾತ ಸಂಭವಿಸಿದ್ದು, ಸುಮಾರು 15 ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಕೊಣಾಜೆಯಿಂದ ಮಾಡೂರು ಮಾರ್ಗವಾಗಿ ಮಂಗಳೂರಿನ ಕೊಟ್ಟಾರಕ್ಕೆಸಂಚರಿಸುವ ಬಸ್ಸಿಗೆ ಕಾಸರಗೋಡು ನಿಂದ ಮಂಗಳೂರು ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ಸು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ದೂರಲಾಗಿದೆ.
Next Story