‘ಸ್ವಾತಂತ್ರ್ಯೋತ್ಸವ’ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ
ಮಂಗಳೂರು, ಆ.11: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿವೆ.
1.‘ಸ್ವಾತಂತ್ರ್ಯ ಸಂಗ್ರಾಮದ ಒಂದು ಘಟನೆ’ ಎಂಬ ವಿಷಯದ ಕುರಿತು ಮುಕ್ತ ವಿಭಾಗದಲ್ಲಿ ಆಶಲತಾ ಕಾಮತ್ ಜಿ. ಮಂಗಳೂರು. (ಪ್ರಥಮ), ಶ್ರೀಕಲಾ ಬಿ. ಕಾರಂತ್ ಅಳಿಕೆ ಬಂಟ್ವಾಳ (ದ್ವಿತೀಯ), ಪ್ರಮೀಳಾ ಪಿ.ಟಿ. ಪಡ್ನೂರು ಪುತ್ತೂರು (ತೃತೀಯ).
2. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ವಿಭಾಗದಲ್ಲಿ ರಮ್ಯಾ ಬಜಿರೆ ಬೆಳ್ತಂಗಡಿ (ಪ್ರಥಮ), ಚೆನ್ನಬಸಮ್ಮ ಡಿ.ಕೆ., ಫಿಲೋಮಿನಾ ಪ.ಪೂ. ಕಾಲೇಜು ಪುತ್ತೂರು (ದ್ವಿತೀಯ), ಆಶೀರ್ವಾದ್ ಯು. ಅಲೋಶಿಯಸ್ ಕಾಲೇಜು ಮಂಗಳೂರು ಹಾಗೂ ಶ್ರೀದೇವಿ ಕೆ.ಫಿಲೋಮಿನಾ ಪ.ಪೂ. ಕಾಲೇಜು ಪುತ್ತೂರು (ತೃತೀಯ).
ಸ್ಪರ್ಧಾ ವಿಜೇತರಿಗೆ ನಗರದ ಪುರಭವನದಲ್ಲಿ ಅ.15ರಂದು ಅಪರಾಹ್ನ ಜರುಗಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾ ಗುವುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.