ಯುನಿವೆಫ್: ಅಹ್ಮದ್ ಬಾವಾರಿಗೆ ಪ್ರತಿಷ್ಠಿತ 'ಶೇಖ್ ಅಹ್ಮದ್ ಸರ್ ಹಿಂದಿ' ಪ್ರಶಸ್ತಿ
ಮಂಗಳೂರು, ಆ. 11: ಯುನಿವೆಫ್ ಕರ್ನಾಟಕ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದು ಕೊಡಮಾಡುವ 2018ನೇ ಸಾಲಿನ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಗೆ ಸವಾಜ ಸೇವಕ ಎಂ. ಅಹ್ಮದ್ ಬಾವಾ ಆಯ್ಕೆಯಾಗಿದ್ದಾರೆ.
ಅವರು ಪ್ರಸ್ತುತ ಕೋಮು ಸೌಹಾರ್ದ ಶಾಂತಿ ಸಮಿತಿಯ ಸದಸ್ಯರಾಗಿ, ಬ್ಯಾರಿ ಸಾಹಿತ್ಯ ಪರಿಷತ್ ನ ಆಜೀವ ಸದಸ್ಯರಾಗಿ, ದ. ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿಯ ಚುನಾಯಿತ ಕಾರ್ಯದರ್ಶಿಯಾಗಿ, ಮಂಗಳೂರು ವರ್ತಕರ ಸಂಘದ ಸ್ಥಾಪಕ ಉಪಾಧ್ಯಕ್ಷರಾಗಿ, ದಕ್ಷಿಣ ರೈಲ್ವೆಯ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾಲಯದ ಹ್ಯೂಮನ್ ಎಥಿಕಲ್ ಕಮಿಟಿ ಸದಸ್ಯರಾಗಿ, ಅಖಿಲಾ ಮಿಲ್ಲಿ ಕೌನ್ಸಿಲ್ ನ ಮಂಗಳೂರು ಶಾಖಾ ಕಾರ್ಯದರ್ಶಿಯಾಗಿ, ಬ್ಯಾರಿ ಅಧ್ಯಯನ ಪೀಠದ ಸದಸ್ಯರಾಗಿ ಹಾಗು ಹಲವು ಸವಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್ರಾಗಿ, ಕೆನರಾ ಛೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕ ಮತ್ತು ಕೋಶಾಧಿಕಾರಿಯಾಗಿ, ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಮತ್ತು ಉಪಾಧ್ಯಕ್ಷರಾಗಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾಯಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ಇವರು ಉತ್ತಮ ಸಮಾಜ ಸೇವಕರಲ್ಲಿ ಒಬ್ಬರು. ಸರಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ಪ್ರತಿದಿನ ಸಂದರ್ಶಿಸುತ್ತಿರುವ ಇವರು ಈ ತನಕ 28 ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಆ.15 ರಂದು ನಗರದ ಫಳ್ನೀರು ರಸ್ತೆಯಲ್ಲಿರುವ ಲುಲು ಸೆಂಟರ್ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಂದು ಎಂ. ಅಹ್ಮದ್ ಬಾವಾ ಅವರನ್ನು'ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ' ನೀಡಿ ಗೌವಿಸಲಾಗುವುದು ಎಂದು ಯುನಿವೆಫ್ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.