ಭಟ್ಕಳ: ಆಳಸಮುದ್ರದಲ್ಲಿ ಮುಳುಗಿದ ಮೀನುಗಾರಿಕೆ ಬೋಟುಗಳು
ವೈರಲ್ ಆದ ಮೀನುಗಾರರ ರಕ್ಷಣೆಯ ವೀಡಿಯೊ
ಉಡುಪಿ, ಆ. 12: ಮಲ್ಪೆಯಿಂದ ತೆರಳಿದ ಮೀನುಗಾರಿಕೆ ಬೋಟುಗಳು ಭಟ್ಕಳ ಗಂಗೊಳ್ಳಿ ನಡುವೆ ಕಡಲು ಪ್ರಕ್ಷುಬ್ಧವಾದ ಹಿನ್ನಲೆಯಲ್ಲಿ ಮುಳುಗಡೆ ಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.
ಎರಡು ಪ್ರತ್ಯೇಕ ಬೋಟುಗಳು ಮಲ್ಪೆಗೆ ಮರಳುವ ಸಂದರ್ಭ ಆಳ ಸಮುದ್ರದಲ್ಲಿ ಮುಳುಗಡೆಯಾಗಿದೆ. ಮುಳುಗಡೆಯಾದ ಬೋಟುಗಳಿಂದ 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಮಲ್ಪೆಯಿಂದ 8 ಜನರೊಂದಿಗೆ ಶಿವ ಗಣೇಶ ಎಂಬ ಬೋಟು ಮೀನುಗಾರಿಕೆಗೆ ತೆರಳಿತ್ತು. ಸಂಜೆಯ ಸುಮಾರಿಗೆ ಗಾಳಿ ಮಳೆಯಿಂದ ಸಮುದ್ರ ಪ್ರಕ್ಷ್ಯಬ್ದವಾದ ಹಿನ್ನಲೆಯಲ್ಲಿ ಬೋಟಿನಲ್ಲಿ ತೂತು ಬಿದ್ದು ಬೋಟು ಮುಳುಗಲು ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
ನಂತರ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ತಿಳಿಸಿದ್ದರು. ಸ್ಥಳಕ್ಕೆ ಮಲ್ಪೆಯಿಂದ ತೆರಳಿದ ಬೇರೊಂದು ಬೋಟಿನಲ್ಲಿ ಮೀನುಗಾರರು ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ 8ಮಂದಿಯನ್ನು ರಕ್ಷಿಸಿ ಇನ್ನೊಂದು ಬೋಟಿನಲ್ಲಿ ಮಲ್ಪೆಗೆ ಕರೆತರಲಾಯಿತು.
ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಬೋಟ್ ಗಂಗೊಳ್ಳಿ ಭಟ್ಕಳದ ನಡುವೆ ಮುಳುಗಡೆಯಾಗಿದೆ. ಮೀನುಗಾರರ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿದ ಮಲ್ಪೆಯ ಬೋಟ್ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆ ತಂದಿದ್ದಾರೆ. ಈ ಎರಡು ಮುಳುಗಡೆಯಾಗುವ ಬೋಟಿನಲ್ಲಿದ್ದ ಮೀನುಗಾರರ ರಕ್ಷಣೆಯ ವೀಡಿಯೊ ವೈರಲ್ ಆಗಿದೆ.