ಕಲ್ಲಮುಂಡ್ಕೂರು: 'ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ'
ಮೂಡುಬಿದಿರೆ, ಆ. 12: ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಗ್ರಾಮ ಪಂಚಾಯತ್ ಹಾಗೂ 25 ಸಂಘಟನೆಗಳ ಸಹಭಾಗಿತ್ವದಲ್ಲಿ ಕಲ್ಲಮುಂಡ್ಕೂರು, ನಿಡ್ಡೊಡಿ, ತೆಂಕ ಮಿಜಾರು, ಬಡಗ ಮಿಜಾರು ಗ್ರಾಮಸ್ಥರಿಗಾಗಿ 4ನೇ ವರ್ಷದ ‘ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ’ ಕಾರ್ಯಕ್ರಮವು ರವಿವಾರ ಕಲ್ಲಮುಂಡ್ಕೂರು ಮಾಣಿಲದಲ್ಲಿ ನಡೆಯಿತು.
ಮುಖ್ಯ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ ಮಾಣಿಲ ಅವರ ಅಧ್ಯಕ್ಷತೆಯಲ್ಲಿ ‘ಕಲ್ಲಮುಂಡೆರ್ದ ಅಂಗರ್ಜಾಲ ಬರ್ಕೆ ಸುಂದರ ಶೆಟ್ರೆನ ನೆಂಪುದ ಚಾವಡಿ’ಯಲ್ಲಿ ಉದ್ಯಮಿ ಎಂ.ಬಿ. ಕರ್ಕೇರಾ ಕಾರ್ಯಕ್ರಮ ಉದ್ಘಾಟಿಸಿದರು. ‘ತುಳುವರ ಕೃಷಿ ಸಂಸ್ಕೃತಿ, ಜೀವನ ಕ್ರಮವನ್ನು ನೆನಪಿಸಿಕೊಡುವ ಇಂಥ ಕಾರ್ಯಕ್ರಮ ಸೌಹಾರ್ದ, ಸಾಮರಸ್ಯದ ಹಬ್ಬ; ಇದು ನಿರಂತರ ನಡೆಯಲಿ’ ಎಂದು ಅವರು ಹಾರೈಸಿದರು.
ದೈಲಬೆಟ್ಟು ಕ್ಷೇತ್ರದ ಪ್ರಧಾನ ಅರ್ಚಕ ವೇ ಮೂ ಮಂಜುನಾಥ ಭಟ್ ಆಶೀರ್ವಚನವಿತ್ತು ಆಟಿ ತಿಂಗಳ ಮಹತ್ವದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಲ್ದಬೆಟ್ಟು ಜಯಪ್ರಕಾಶ್ ಪಡಿವಾಳ್, ವಿ.ಎಸ್.ಎಸ್. ಸಂಘದ ಅಧ್ಯಕ್ಷ ಕೆ. ವರದರಾಯ ಕಾಮತ್, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಉದ್ಯಮಿ ದೀಪಾ ಅರುಣ್ ಭಟ್, ಕಲ್ಲಮುಂಡ್ಕೂರು ವೈದ್ಯಾಧಿಕಾರಿ ಡಾ ತ್ರಿವೇಣಿ ಆಚಾರ್ಯ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ರೇವತಿ ಶೆಟ್ಟಿ, ಕಲ್ಲಮುಂಡ್ಕೂರು ಪಿಡಿಓ ಉಗ್ಗಪ್ಪ ಮೂಲ್ಯ ಭಾಗವಹಿಸಿದ್ದರು.
ಶಾಸಕ ಉಮಾನಾಥ ಕೋಟ್ಯಾನ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ ಕಟೀಲು ಸಹಿತ ಗಣ್ಯರು ಆಗಮಿಸಿ ಶುಭಹಾರೈಸಿದರು. ಉಪಾಧ್ಯಕ್ಷರಾದ ಸದಾನಂದ ಪೂಜಾರಿ ಪಾದೆ, ಸುಖಾನಂದ ಶೆಟ್ಟಿ ಕೊಟ್ರಪಾಡಿ, ಸಂದೀಪ್ ಸಾಲಿಯಾನ್ ಕುತ್ತಟ್ಟ, ಅಲ್ಪೋನ್ಸ್ ಡಿಸೋಜ ಮಂಜನಬೈಲು. ಕಾರ್ಯದರ್ಶಿಗಳಾದ ನಾಗರಾಜ ಕಾಮತ್, ವಿಜಯಕುಮಾರ್ ಕಲ್ಲಮುಂಡ್ಕೂರು ಸಹಿತ ವಿವಿಧ ಪದಾಧಿಕಾರಿಗಳು ಉಪಸ್ಥಿತರಿ ದ್ದರು. ಈ ಸಂದರ್ಭದಲ್ಲಿ ಮಾಜಿ ಸೈನಿಕ ನಿಡ್ಡೋಡಿ ಡೊಂಬಯ್ಯ ಪೂಜಾರಿ, ಪ್ರಸೂತಿ ತಜ್ಞೆ ಬಯ್ಯು ಬಾಯಿ ವಂಟಿಮಾರ್ ತೆಂಕಮಿಜಾರು, ನಾಟಿ ವೈದ್ಯೆ ಅಪ್ಪಿ ಮೊಲ್ದಿ ವಜ್ರಬೆಟ್ಟು ಬಡಗ ಮಿಜಾರು ಅವರನ್ನು ಸನ್ಮಾನಿಸಲಾಯಿತು.
ಅಶೋಕ್ ನಾಕ್ ಸ್ವಾಗತಿಸಿದರು. ಉಪಾಧ್ಯಕ್ಷ ಜೋಕಿಂ ಕೊರೆಯ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಗಂಗಾಧರ ಶೆಟ್ಟಿ ವಂದಿಸಿದರು.