ಪುತ್ತೂರು: ಲಾರಿ-ಮೊಪೆಡ್ ನಡುವೆ ಢಿಕ್ಕಿ; ಸವಾರ ಮೃತ್ಯು
ಪುತ್ತೂರು, ಆ. 13: ಈಚರ್ ಲಾರಿ ಮತ್ತು ಎಂ.80 ಮೊಪೆಡ್ ನಡುವೆ ಢಿಕ್ಕಿ ಸಂಭವಿಸಿ ಎಂ 80 ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ಬೊಳುವಾರು ಸಮೀಪದ ಉರ್ಲಾಂಡಿ ಎಂಬಲ್ಲಿ ಸೋಮವಾರ ಸಂಭವಿಸಿದೆ.
ಪಡ್ನೂರು ಗ್ರಾಮದ ಪರಮಾರು ನಿವಾಸಿ ಮಾಯಿಲಪ್ಪ ಗೌಡ (45) ಮೃತಪಟ್ಟವರು.
ಕೃಷಿಕರಾದ ಮಾಯಿಲಪ್ಪ ಗೌಡ ಅವರು ಸೋಮವಾರ ಮಧ್ಯಾಹ್ನ ಬಳಿಕ ಪುತ್ತೂರಿನಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಬಂದು ತರಕಾರಿ ಖರೀದಿಸಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿಕರಾದ ಮಾಯಿಲಪ್ಪ ಗೌಡ ಅವರು ಮೂರು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಮೃತರು ಪತ್ನಿ, ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
Next Story