ಉಡುಪಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ನಾಮಪತ್ರ ಸಲ್ಲಿಕೆ
ಉಡುಪಿ, ಆ.13: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ದಂತೆ ನಾಮಪತ್ರ ಸಲ್ಲಿಕೆಯ ಮೂರನೆ ದಿನವಾದ ಇಂದು ಉಡುಪಿ ನಗರಸಭೆಯ 35ವಾರ್ಡ್ಗಳ ಪೈಕಿ ಕಿನ್ನಿಮುಲ್ಕಿ ವಾರ್ಡ್ಗೆ ಕಾಂಗ್ರೆಸ್ ಪಕ್ಷದಿಂದ ಹಾಲಿ ಸದಸ್ಯೆ ಅಮೃತಾ ಕೃ್ಣಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ.
ಇದೀಗ ನಾಲ್ಕನೆ ಬಾರಿಗೆ ಕಿನ್ನಿಮುಲ್ಕಿ ವಾರ್ಡ್ನಿಂದ ಸ್ಪರ್ಧಿಸುತ್ತಿರುವ ಅಮೃತಾ ಕೃಷ್ಣಮೂರ್ತಿ ಚುನಾವಣಾಧಿಕಾರಿ ಶ್ರೀನಿವಾಸ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೃಷ್ಣಮೂತಿ ಆಚಾರ್ಯ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಉಳಿದಂತೆ ಕುಂದಾಪುರ ಪುರಸಭೆಯ 23 ವಾರ್ಡುಗಳಿಗೆ, ಕಾರ್ಕಳ ಪುರಸಭೆಯ 23 ವಾರ್ಡುಗಳಿಗೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ನ 16 ವಾರ್ಡುಗಳಿಗೆ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮ ಪತ್ರ ಸಲ್ಲಿಸಲು ಆ.17 ಕೊನೆಯ ದಿನವಾಗಿದ್ದು, ಆ.18ರಂದು ನಾಮಪತ್ರ ಗಳನ್ನು ಪರಿಶೀಲನೆ ನಡೆಯಲಿದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾ ವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story