ಸುರತ್ಕಲ್ ಟೋಲ್ ನವೀಕರಣದ ವಿರುದ್ಧ ವಿವಿಧ ಸಂಘಟನೆಗಳ ಧರಣಿ
ಮಂಗಳೂರು, ಆ.14: ಸುರತ್ಕಲ್ ಅಕ್ರಮ ಟೋಲ್ ಗೇಟ್ ಗುತ್ತಿಗೆ ನವೀಕರಣ ವಿರೋಧಿಸಿ ಮತ್ತು ಹೆದ್ದಾರಿ ಕಾಮಗಾರಿ ವಿಳಂಬ ಖಂಡಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಸುರತ್ಕಲ್ ಟೋಲ್ಗೇಟ್ ಮುಂದೆ ಧರಣಿ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಪೊರೇಟರ್ಗಳಾದ ದಯಾನಂದ ಶೆಟ್ಟಿ, ರೇವತಿ ಪುತ್ರನ್ ಮಾತನಾಡಿದರು. ಧರಣಿಗೆ ಡಿವೈಎಫ್ಐ ಸುರತ್ಕಲ್ ವಲಯ, ಕಿನ್ನಿಗೋಳಿ ಮುಲ್ಕಿ ವಲಯ ಲಾರಿ ಮಾಲಕರ ಸಂಘ, ದ.ಕ.ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಮಾಲಕರ ಎಸೋಸಿಯೇಶನ್, ಜಯಕರ್ನಾಟಕ ಸುರತ್ಕಲ್ ವಲ ಮತ್ತಿತರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಧರಣಿಯಲ್ಲಿ ವೈ ರಾಘವೇಂದ್ರ ರಾವ್, ಸಂತೋಷ್ ಬಜಾಲ್, ಅಜ್ಮಾಲ್ ಕಾನ, ನವೀನ್ ಕೊಂಚಾಡಿ, ಮುಸ್ತಫಾ ಬೈಕಂಪಾಡಿ ಮತ್ತಿತರರು ಪಾಲ್ಗೊಂಡಿದ್ದರು.
Next Story