ಆ16ರಿಂದ ಯೆನೆಪೊಯ ಕೊಡಿಯಾಲ ಬೈಲಿನಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ
ಮಂಗಳೂರು, ಆ.14:ನಗರದ ಕೊಡಿಯಾಲ ಬೈಲಿನಲ್ಲಿರುವ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆ16ರಿಂದ 18ರವರೆಗೆ ಮೂತ್ರ ಕೋಶದ ಸಮಸ್ಯೆಗಳ ಬಗ್ಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ.
ಶಿಬಿರದಲ್ಲಿ ಮೂತ್ರಕೋಶದಲ್ಲಿ ಬೆಳೆಯುವ ಕಲ್ಲು, ಪ್ರಾಸ್ಟೇಟ ಸಮಸ್ಯೆ, ಮೂತ್ರನಾಳದ ಸಮಸ್ಯೆಗೆ ಸಂಬಂಧಿಸಿದಂತೆ ಖ್ಯಾತ ವೈದ್ಯರಾದ ಡಾ.ಅಶೋಕ್ ಪಂಡಿತ್ ಹಾಗೂ ಅವರ ನೇತೃತ್ವದ ತಂಡ ಶಿಬಿರದಲ್ಲಿ ಸಲಹೆ ಮತ್ತು ತಪಾಸಣೆ ನಡೆಸಲಿದೆ.
ಶಿಬಿರದಲ್ಲಿ ಉಚಿತ ನೋಂದಣಿ ಶೇ 50 ರಿಯಾಯಿತಿ ದರದಲ್ಲಿ ಸಮಾಲೋಚನೆ, ಅಲ್ಟ್ರಾ ಸೌಂಡ್ ಮತ್ತು ಕೆಲವು ಚಿಕಿತ್ಸೆಗಳನ್ನು ಶೇ 50 ರಿಯಾಯಿತಿ ದರದಲ್ಲಿ ಮಾಡಲಾಗುವುದು. ಮೊದಲು ನೊಂದಣಿ ಮಾಡುವ 100 ಜನರಿಗೆ ನೊಂದಣಿ ಉಚಿತವಾಗಿದ್ದು ಉಚಿತ ಪಿಎಸ್ಎ ತಪಾಸಣೆ ಲಭ್ಯವಿರುತ್ತದೆ. ಎಲ್ಲಾ ತಪಾಸಣೆಗೆ 2360 ಆಗಿದ್ದು ಶೇ 50ರ ರಿಯಾಯಿತಿ ದರದ ಪ್ರಕಾರ 1180 ರೂ. ನೀಡಿ ಚಿಕಿತ್ಸೆ ಪಡೆಯಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 7619274091 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story