ಜರ್ಮನಿಯ ಪ್ರಾಧ್ಯಾಪಕ ಫ್ಯಾಬ್ಲೊ ಅಲ್ವೈಟ್ರೊಂದಿಗೆ ಸಂವಾದ
ಮಂಗಳೂರು, ಆ.14: ಅರಕ್ಷಕ ಮಹಾನಿರ್ದೇಶಕರು ಮತ್ತು ಗೃಹರಕ್ಷಕ ದಳದ ಮಹಾಸಮಾದೇಷ್ಟ, ಪೌರ ರಕ್ಷಣೆಯ ರಾಜ್ಯ ನಿರ್ದೇಶಕರ ಸೂಚನೆಯಂತೆ ಜರ್ಮನಿಯ ಪಾಧ್ಯಾಪಕ ಫ್ಯಾಬ್ಲೊ ಅಲ್ವೈಟ್ರೊಂದಿಗೆ ಸಂವಾದ ಕಾರ್ಯಕ್ರಮವು ಮಂಗಳವಾರ ಗೃಹರಕ್ಷಕ ದಳದ ಕಚೇರಿಯಲ್ಲಿ ಜರುಗಿತು.
ಸ್ವಯಂ ಸೇವಕರು ತುರ್ತು ಸಂದರ್ಭದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸರ್ವೆ ಮಾಡಲು ಮಂಗಳೂರಿಗೆ ಆಗಮಿಸಿದ್ದ ಫ್ಯಾಬ್ಲೊ ಅಲ್ವೈಟ್ ಸ್ವಯಂಸೇವಕರು ಕರ್ತವ್ಯ ನಿರ್ವಹಿಸುವಾಗಿನ ಅನುಭವಗಳು, ತುರ್ತು ಸಮಯದಲ್ಲಿ ವಿಕೋಪದಲ್ಲಿ ನಿರ್ವಹಿಸಬಹುದಾದ ಕರ್ತವ್ಯಗಳು ಹಾಗೂ ತೊಂದರೆಗಳು, ಸ್ವಯಂ ಸೇವಕರಾಗಿ ಕೆಲಸ ಮಾಡುವಾಗ ಸಮಾಜಕ್ಕೆ ತಮ್ಮ ಕೊಡುಗೆಗಳು, ಜವಾಬ್ದಾರಿಗಳು ಹಾಗೂ ಸಮಾಜದಲ್ಲಿ ಸಿಗುವಂತಹ ಗೌರವಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದರು.
ಸಂವಾದದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲಿ ಮೋಹನ್ ಚೂಂತಾರು, ಉಪಸಮಾದೇಷ್ಟ ರಮೇಶ್, ರಿಜಿನಲ್ ಫೈರ್ ಆಫೀಸರ್ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜುಲ್ಫಿಕರ್, ಮಾಜಿ ಅಗ್ನಿಶಾಮಕ ಅಧಿಕಾರಿ ಸಿ. ಓಬಯ್ಯ ಕುಲಾಲ್, ಘಟಕಾಧಿಕಾರಿ ಮಾರ್ಕ್ಶೇರಾ, ಪಣಂಬೂರು ಘಟಕಾಧಿಕಾರಿ ಹರೀಶ್ ಆಚಾರ್ಯ ಉಪಸ್ಥಿತರಿದ್ದರು.