ಆತೂರುಬೈಲ್ ಖಮರುಲ್ ಇಸ್ಲಾಂ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಉಪ್ಪಿನಂಗಡಿ, ಆ.15: ಆತೂರುಬೈಲ್ ಖಮರುಲ್ ಇಸ್ಲಾಂ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮದ್ರಸ ಸ್ಥಾಪಕಧ್ಯಕ್ಷ ಹಾಜಿ ಮುಹಮ್ಮದ್ ನೆರವೇರಿಸಿದರು.
ಮದ್ರಸ ಮುಖ್ಯ ಅಧ್ಯಾಪಕ ಸಿ.ಎಂ.ಇಬ್ರಾಹೀಂ ಕೌಸರಿ ಸಂದೇಶ ಭಾಷಣ ಮಾಡಿದರು.
ಮದ್ರಸ ಅಧ್ಯಕ್ಷ ಡಿ.ಎ.ಪುತ್ತುಮೋನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹ ಅಧ್ಯಾಪಕ ಬದ್ರುದ್ದೀನ್ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ರಾಝಿಕ್, ಮಾಜಿ ಅಧ್ಯಕ್ಷರಾದ ಬಶೀರ್, ಕೆ.ಇಬ್ರಾಹೀಂ, ಕಾರ್ಯದರ್ಶಿ ಅಬೂಬಕರ್, ಉಪಾಧ್ಯಕ್ಷ ಸುಲೈಮಾನ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯೀಲ್ ಉಪಸ್ಥಿತರಿದ್ದರು.
ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಪ್ರತಿಭಾ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಬಹುಮಾನಗಳನ್ನು ವಿತರಿಸಲಾಯಿತು.
ಎಸ್ಕೆಎಸ್ಬಿವಿ ಕಾರ್ಯದರ್ಶಿ ಅಂರಾಝ್ ಸ್ವಾಗತಿಸಿ, ವಂದಿಸಿದರು.
Next Story