ಬಂಟ್ವಾಳ: ಅಲ್ಲಲ್ಲಿ ಸಂಭ್ರಮ ಸ್ವಾತಂತ್ರೋತ್ಸವ
ಬಂಟ್ವಾಳ, ಆ. 15: ಬಂಟ್ವಾಳ ತಾಲೂಕಿನ ಅಲ್ಲಲ್ಲಿ ಸಂಭ್ರಮದಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಬಂಟ್ವಾಳ ನಗರ ಠಾಣೆ: ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಎಎಸ್ಪಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ
ಧ್ವಜಾರೋಹಣ ನಡೆಸಲಾಯಿತು.
ಬಂಟ್ವಾಳ ಎಎಸ್ಪಿ ಋಷಿಕೇಶಿ ಸೋನಾವಣೆ ಧ್ವಜಾರೋಹಣ ಮಾಡಿದರು. ನಗರ ಠಾಣಾ ಎಸ್ಸೈ ಚಂದ್ರಶೇಖರ ಎಚ್.ವಿ., ಅಪರಾಧ ವಿಭಾಗದ ಎಸ್ಸೈ ಹರೀಶ್ ಎಂ. ಆರ್., ಬಂಟ್ವಾಳ ನಗರ ಪೊಲಿಸ್ ಠಾಣಾ ಮತ್ತು ಬಂಟ್ವಾಳ ಉಪ ವಿಭಾಗ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ತಲಪಾಡಿ: ಎಸ್ಡಿಪಿಐ ತಲಪಾಡಿ ಘಟಕ, ತಲಪಾಡಿ ಜುಮಾ ಮಸೀದಿ, ಅಂಗವಾಡಿ ವತಿಯಿಂದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಅಲ್ಲಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ತಲಪಾಡಿ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಬದ್ರಿಯ ಜುಮಾ ಮಸ್ಜಿದ್ ಅಧ್ಯಕ್ಷ ಇದಿನಬ್ಬ ಕರ್ನಾಟಕ, ಖತೀಬ್ ಸ್ವಾದಿಕ್ ಅರ್ಹರಿ, ಇದಿನಬ್ಬ, ಸಾಮಾಜಿಕ ಹೋರಾಟಗಾರ ರಾಮಣ್ಣ ಶೆಟ್ಟಿ, ಇಸಾಕ್ ಶಾಂತಿಯಂಗಡಿ, ಬಶೀರ್, ಮುಮ್ತಾರ್ ಲತೀಫ್, ಆರ್.ಕೆ.ಅಶ್ರಫ್, ಮುಸ್ತಾಕ್ ತಲಪಾಡಿ, ಅನ್ವರ್ ಕೆ.ಎಚ್., ಅಬ್ದುಲ್ ಖಾದರ್, ಅಶ್ರಫ್, ಅಕ್ಬರ್ ಅಲಿ ಉಪಸ್ಥಿತರಿದ್ದರು.
ಸಜೀಪ ಮುನ್ನೂರು: ಸಜೀಪ ಮುನ್ನೂರು ಆಲಾಡಿ ಎಸ್ಕೆಎಸ್ಸೆಸ್ಸೆಫ್ ಯುನಿಟ್ ವತಿಯಿಂದ ಆಲಾಡಿ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಧ್ವಜಾರೋಹಣ ಮಾಡಿದರು. ಕಾರ್ಯದರ್ಶಿ ಕಬೀರ್ ಗಡಿಯಾರ, ಯೂಸುಫ್ ಆಲಾಡಿ, ಹಕೀಂ ಕಡಬ ಉಪಸ್ಥಿತರಿದ್ದರು.
ಚಟ್ಟೆಕಲ್ಲು: ಚಟ್ಟೆಕಲ್ಲು ಜಲಾಲಿಯಾ ಜುಮಾ ಮಸೀದಿ ಮತ್ತು ಎಸ್ಸೆಸ್ಸೆಫ್ ಇದರ ವತಿಯಿಂದ ಜುಮಾ ಮಸೀದಿಯ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸೈಯದ್ ಮುಶ್ತಾಖುರ್ರಮಾನ್ ತಂಙಳ್ ವರು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಅಬ್ದುಲ್ ಕರೀಂ ಕೆಂಜಿಲ, ಅಬ್ದುಲ್ ರಹಿಮಾನ್ ಚಟ್ಟೆಕಲ್ಲು, ಹಾರಿಸ್ ಚಟ್ಟೆಕಲ್ಲು ಹಾಗೂ ಸಿರಾಜುಲ್ ಹುದಾ ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಲದಪದವು: ಅಲ್ ಮಸ್ಜಿದುಲ್ ಬದ್ರಿಯಾ ಮಸೀದಿ ಆಲದಪದವು ಆಚರಿಸಿದ ಸ್ವಾತಂತ್ರೋತ್ಸವದಲ್ಲಿ ಮಸೀದಿಯ ಅಧ್ಯಕ್ಷ ಹಂಝ ಬಿ., ಮಸೀದಿಯ ಉಸ್ತಾದ್, ಇಸ್ಮಾಯಿಲ್ ಮದನಿ, ಉಪಾಧ್ಯಕ್ಷ ಅಬ್ಬಾಸ್ ಬಿ., ಕೋಶಾಧಿಕಾರಿ ಹಮೀದ್ ಆಲದಪದವು, ಕಾರ್ಯದರ್ಶಿ ಇಮ್ರಾನ್ ಬಸ್ತಿಕೋಡಿ, ಖಾಲಿದ್ ಬಸ್ತಿಕೋಡಿ, ರಿಯಾಝ್ ಬಸ್ತಿಕೋಡಿ ಹಾಜರಿದ್ದರು.
ಕೈಕಂಬ: ಎಸ್ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಕೈಕಂಬದ ಕಚೇರಿಯಲ್ಲಿ ರಾಜಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಜಿಲ್ಲಾ ಮುಖಂಡ ಶಾಹುಲ್ ಹಮೀದ್ ಎಸ್.ಎಚ್., ಇಸ್ಮಾಯಿಲ್ ಬಾವ, ಇಜಾರ್, ಇಸಾಕ್ ತಲಪಾಡಿ, ಇಮ್ರಾನ್ ಪಿ.ಜೆ. ಉಪಸ್ಥಿತರಿದ್ದರು.
ಬೆಂಜನಪದವು: ಮಸ್ಜಿದುರಹ್ಮಾನ್ ಬೆಂಜನಪದವನಲ್ಲಿ ಆಚರಿಸಿದ ಸ್ವಾತಂತ್ರೋತ್ಸವದಲ್ಲಿ ಉಮೇಶ್ ಸಾಲ್ಯಾನ್, ರಿಚರ್ಡ್ ಫೆರ್ನಾಂಡಿಸ್, ಹಕೀಂ ಕಲಾಯಿ, ಕೇಶವ, ಶಶಿ, ಮಸೀದಿಯ ಅಧ್ಯಕ್ಷ ಇಕ್ಬಾಲ್, ಶಾಫದ್ ಹಾಜರಿದ್ದರು.
ವಿಟ್ಲದಲ್ಲಿ ಸ್ವಾತಂತ್ರೋತ್ಸವ:
ಪಾಟ್ರಕೋಡಿ: ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ಸದಸ್ಯ ಅದಂ ಹಾಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಝಾಂ, ಮೂಸಲ್ ಪೈಝಿ ಹಾಜರಿದ್ದರು.
ಸೆರ್ಕಳ: ಬದ್ರಿಯ ಜುಮಾ ಮಸೀದಿ ಸೆರ್ಕಳದಲ್ಲಿ ಆಚರಿಸಿದ ಸ್ವಾತಂತ್ರ್ಯೋತ್ಸವದಲ್ಲಿ ಜಮಾಅತ್ ಅಧ್ಯಕ್ಷ ಸಿ.ಎಚ್.ಅಬೂಬಕರ್, ಖತೀಬ್ ಫಾರೂಕ್ ಸಖಾಫಿ, ಅಧ್ಯಾಪಕ ಮುಹಿಯುದ್ದೀನ್ ಮದನಿ, ಎಸ್ವೈಎಸ್ ಬ್ರಾಂಚ್ ಅಧ್ಯಕ್ಷ ಅಬೂಬಕರ್ ಸೆರ್ಕಳ, ಜಮಾಅತ್ ಕೋಶಾಧಿಕಾರಿ ಯೂಸುಫ್ ಬಂಗುಲೆ, ಸಿ.ಎಚ್. ಅಬ್ದುಲ್ ರಝಾಕ್, ಅಶ್ರಫ್, ಉಸ್ತಾದ್ ಇಬ್ರಾಹೀಂ ಖಲೀಲ್ ಹಾಜರಿದ್ದರು.
ಒಕ್ಕೆತ್ತೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ತ್ಯೋತ್ಸವ ಆಚರಿಸಲಾಯಿತು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್ ಹಾರೀಸ್ ಅವರು ಧ್ವಜಾರೋಹಣಗೈದರು. ಶಾಲಾ ಮುಖ್ಯ ಶಿಕ್ಷಕಿ ಸುಬ್ಬಲಕ್ಷ್ಮೀ, ಶಿಕ್ಷಣ ಪ್ರೇಮಿ ಅಬ್ದುಲ್ ಸಮದ್, ಸುನೀತಾ ರಾವ್, ಮಹಮ್ಮದ್ ಹನೀಫ್ ಪಿ.ಎಂ, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿಗ ಭಾಗವಹಿಸಿದ್ದರು.
ಬ್ರಹ್ಮರಕೂಟ್ಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ಶಿವಪ್ರಸಾದ್ ಕನಪಾಡಿ, ಕಳ್ಳಿಗೆ ಗ್ರಾಪಂಸದಸ್ಯ ಮಧುಸೂದನ್ ಶೆಣೈ, ಕಳ್ಳಿಗೆ ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ದಿವಾಕರ ಪಂಬಂಧಬೆಟ್ಟು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶ್ರೀಕಲಾ, ಉಪಾಧ್ಯಕ್ಷ ಕಿಶೋರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಹಾಜರಿದ್ದರು.
ಕಲ್ಲಡ್ಕ: ಇಲ್ಲಿನ ಗಾಂಧಿ ಕಟ್ಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ನೆರೆವೇರಿಸಿದರು. ದಿನೇಶ್ ಶೆಣೈ, ಅಬೂಬಕರ್, ನರಸಿಂಹ ಮಡಿವಾಳ, ಜಿನ್ನಪ್ಪ ಪೂಜಾರಿ, ಹುಸೈನ್, ಸೂರಜ್, ಇಕ್ಬಾಲ್ ಉಪಸ್ಥಿತರಿದ್ದರು.