ಮಂಜನಾಡಿ: ಬೈಕ್ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು
ಮಂಗಳೂರು, ಆ.15: ಮಂಜನಾಡಿ ಸಮೀಪದ ಕೈರಂಗಳದಲ್ಲಿ ಮಂಗಳವಾರ ಮಧ್ಯಾಹ್ನ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಕನಕಾ ಯಾನೆ ಕವಿತಾ ಶೆಟ್ಟಿ (54) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅವರು ಪತಿ ಕೊಣಾಜೆ ಕೆಎಸ್ಆರ್ಪಿ ಇದರ ಎಆರ್ಎಸ್ಐ ಸತೀಶ್ ಶೆಟ್ಟಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸತೀಶ್ ಶೆಟ್ಟಿ ಮತ್ತು ಪತ್ನಿ ಕನಕಾ ಯಾನೆ ಕವಿತಾ ಶೆಟ್ಟಿ ಅವರು ಬೈಕ್ನಲ್ಲಿ ಸ್ಥಳೀಯ ಬ್ಯಾಂಕಿಗೆ ಹೋಗಿದ್ದು, ಅಲ್ಲಿಂದ ಮರಳಿ ಮನೆಗೆ ವಾಪಸಾಗುತ್ತಿದ್ದಾಗ 1:10 ಕ್ಕೆ ಕೈರಂಗಳದಲ್ಲಿ ಸ್ಕಿಡ್ಆಗಿ ಬೈಕ್ ಮಗುಚಿತ್ತು. ಈ ಸಂದರ್ಭದಲ್ಲಿ ಕವಿತಾ ಶೆಟ್ಟಿ ಅವರು ಗಾಯಗೊಡಿದ್ದರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ 9:30ಕ್ಕೆ ಮೃತಪಟ್ಟಿದ್ದಾರೆ.
ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story