ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್: ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು, ಆ. 15: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ವಿಶ್ವಾಸ್ ಬಾವಾ ಬಿಲ್ಡರ್ಸ್ ವತಿಯಿಂದ 72ನೇ ಸ್ವಾತಂತ್ಯ್ರೋತ್ಸವವನ್ನು ಆಚರಿಸಲಾಯಿತು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದ.ಕ. ಜಿಲ್ಲಾಧ್ಯಕ್ಷ ಮೌಲಾನಾ ರಫೀಕ್ ದಾರಿಮಿ, ಸುಲೋಚನ ಕನ್ಸ್ಟ್ರಕ್ಷನ್ನ ಆಡಳಿತ ನಿರ್ದೇಶಕ ಅಡ್ವಕೇಟ್ ಮಂಜುನಾಥ್ ಕೆ ಹಾಗೂ ಸಮಾಜ ಸೇವಕ ಪೌಲ್ ರೋಡ್ರಿಗಸ್ ಜೊತೆಯಾಗಿ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮೋನು ಕತರ್ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಹಾಗೂ ವಿಶ್ವಾಸ್ ಬಾವಾ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನವಾಝ್ ಜೆಪ್ಪು, ವಿಶ್ವಾಸ್ ಎಸ್ಟೇಟ್ನ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ, ವಿಶ್ವಾಸ್ ಬಾವಾ ಬಿಲ್ಡರ್ಸ್ನ ಯೂಸುಫ್, ಅಬ್ದುಲ್ ಹಮೀದ್, ಪರ್ವೇಝ್, ಶೈಲೇಶ್, ನಿಝಾಮ್, ಅತಾವುಲ್ಲ, ನಾಸಿರ್, ಟ್ಯಾಲೆಂಟ್ನ ಸಲಹೆಗಾರರಾದ ಬಿ.ಎ ಅಕ್ಬರ್ ಅಲಿ, ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ನಂಡೆ ಪೆಂಙಳ್ನ ನಕಾಶ್ ಬಾಂಬಿಲ, ಆಸರೆ ವಿಮೆನ್ಸ್ ಫೌಂಡೇಶನ್ನ ಆತಿಕಾ ರಫೀಕ್, ಮುಮ್ತಾಝ್ ಪಕ್ಕಲಡ್ಕ, ಟ್ಯಾಲೆಂಟ್ ಮಹಿಳಾ ಪದವೀಧರರ ಸಂಘದ ಹಾಜಿರ, ತೌಹೀದ, ಸುಹಾನ, ಮೊಬೈಲ್ ಕೋರ್ಸಿನ ವಿದ್ಯಾರ್ಥಿಗಳು, ವಿಶ್ವಾಸ್ ಕ್ರೌನ್ ಮತ್ತು ವಿಶ್ವಾಸ್ ಪರ್ಲ್ ಫ್ಲಾಟ್ ನಿವಾಸಿಗಳು, ಅಂಗಡಿ ಮಾಲಕರು, ಸೈಟ್ ಸೂಪರ್ವೈಸರ್ಗಳು ಉಪಸ್ಥಿತರಿದ್ದರು.
ಟ್ಯಾಲೆಂಟ್ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ರಾಷ್ಟ್ರಗೀತೆ ಹಾಡಿದರು. ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಟ್ಯಾಲೆಂಟ್ ಮಹಿಳಾ ಪದವೀಧರರ ಸಂಘದ ಅಧ್ಯಕ್ಷೆ ಮುನೀಝಾ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.