ಪುತ್ತೂರು: ನ್ಯಾಯಾಲಯ ಸಂಕೀರ್ಣದಲ್ಲಿ ಸ್ವಾತಂತ್ರ್ಯೋತ್ಸವ
ಪುತ್ತೂರು, ಆ. 15: ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶಿವಣ್ಣ ಅವರು ನೆರವೇರಿಸಿ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಹರೀಶ್ ಚಾರ್ವಕ, ಕರ್ನಾಟಕ ಲೋಕಾಯುಕ್ತ ಕಾರ್ಯದರ್ಶಿ ನ್ಯಾಯಾಧೀಶ ವಿಜಯ ಕುಮಾರ್, ನ್ಯಾಯಾಧೀಶರಾದ ಮನೋಹರ್ ಆಗಮಿಸಿದ್ದರು. ಪುತ್ತೂರಿನ ನ್ಯಾಯಾಧೀಶರಾದ ಮಂಜುನಾಥ್, ಲತಾ ದೇವಿ, ಪ್ರಕಾಶ್ ರವರು ಶುಭಹಾರೈಸಿದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ರಾಮಮೋಹನ್ ರಾವ್, ಕೆ.ಪಿ.ಜೇಮ್ಸ್, ಜಗನ್ನಿವಾಸ್ ರಾವ್, ನೂರುದ್ದೀನ್ ಸಾಲ್ಮರ, ಉದಯ್ ಶಂಕರ್ ಶೆಟ್ಟಿ, ಮನೋಹರ್ ಕೆವಿ, ದಿವಾಕರ್ ನಿಡ್ವಣ್ಣಾಯ, ಸುರೇಶ್ ರೈ, ದೇವಾನಂದ ಕೆ, ಜಗನ್ನಾಥ ರೈ, ಪ್ರವೀಣ್ ಕುಮಾರ್, ನರಸಿಂಹ ಪ್ರಸಾದ್, ಗಿರೀಶ್ ಮಳಿ, ಸ್ವಾತಿ ಜೆ.ಆರ್, ಸಿದ್ದೀಕ್ , ಮಾಧವ ಪೂಜಾರಿ, ಕೃಷ್ಣಪ್ಪ ಗೌಡ, ದಿವ್ಯರಾಜ್ ಹೆಗ್ಡೆ, ದೀಪಕ್, ಕುಮಾರ್ ನಾಥ್, ವಿನಯ ರಾಜ್, ನ್ಯಾಯಾಲಯದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ನಗರ ಪೊಲೀಸರು ವಿಶೇಷ ಧ್ವಜಾರೋಹಣ ಪರೇಡ್ ನಡೆಸಿದರು. ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ ಸ್ವಾಗತಿಸಿ, ಉಪಾಧ್ಯಕ್ಷರಾದ ಮಹಾಬಲ ಗೌಡ ವಂದಿಸಿದರು.