ಶಿರಾಡಿ,ಮಡಿಕೇರಿ ಘಾಟ್ ಬಂದ್ ಹಿನ್ನೆಲೆ: ಹಗಲು ವೊಲ್ವೋ ಬಸ್ ಸಂಚಾರ ಆರಂಭ
ಮಂಗಳೂರು, ಆ.16: ಭಾರಿ ಮಳೆಗೆ ಭೂಕುಸಿತದಿಂದ ಶಿರಾಡಿ ಘಾಟ್ ಮತ್ತು ಮಡಿಕೇರಿ ಘಾಟ್ ರಸ್ತೆ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಬೆಂಗಳೂರಿಗೆ ಎಸ್.ಕೆ. ಬಾರ್ಡರ್, ಕುದುರೆಮುಖ ಮಾರ್ಗದಲ್ಲಿ ಆ.16ರಿಂದ ಹಗಲು ವೊಲ್ವೋ ಬಸ್ ಸಂಚಾರ ಆರಂಭವಾಗಲಿದೆ.
ಶಿರಾಡಿ ಮತ್ತು ಮಡಿಕೇರಿ ಘಾಟ್ ಸಂಚಾರಕ್ಕೆ ಮುಕ್ತಗೊಳ್ಳುವವರೆಗೆ ಕುದುರೆಮುಖ ಮಾರ್ಗದಲ್ಲಿ ಪರ್ಯಾಯ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story