ವಿದ್ಯುತ್ ತಂತಿ ತುಳಿದು ಮಹಿಳೆ ಮೃತ್ಯು
ಕಾರ್ಕಳ, ಆ.17: ಮಳೆಯಿಂದ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಮುಂಡ್ಕೂರು ದೇವಸ್ಥಾನದ ಬಳಿ ನಡೆದಿದೆ.ಮೃತರನ್ನು ಸ್ಥಳೀಯ ನಿವಾಸಿ ಯಮುನಾ ಸಪಲಿಗ(72) ಎಂದು ಗುರುತಿಸ ಲಾಗಿದೆ.
ಕಳೆದ ರಾತ್ರಿ ವಿಪರೀತ ಮಳೆಯಿಂದ ಮರ ಉರುಳಿ ವಿದ್ಯುತ್ ತಂತಿ ತುಂಡಾಗಿ ನೆಲದಲ್ಲಿ ಬಿದ್ದಿತ್ತೆನ್ನಲಾಗಿದೆ. ಇದನ್ನು ಗಮನಿಸಿದೆ ಬೆಳಗ್ಗೆ ದೇವರಿಗೆ ಹೂವನ್ನು ಕೊಯ್ಯಲು ಮನೆಯ ಅಂಗಳದ ಸಮೀಪ ಹೋಗಿದ್ದ ಯಮುನಾ, ತಂತಿಯನ್ನು ಆಕಸ್ಮಿಕವಾಗಿ ಕಾಲಿನಿಂದ ತುಳಿದು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story