ವಾಜಪೇಯಿ ಆದರ್ಶದೊಂದಿಗೆ ಹೆಜ್ಜೆ ಇಡಬೇಕಾಗಿದೆ: ಕೋಟ
ಉಡುಪಿ, ಆ.17: ಹಿರಿಯ ಮುತ್ಸದಿ ಅಟಲ್ ಬಿಹಾರಿ ವಾಜಪೇಯಿಯ ಆದರ್ಶವನ್ನು ಮಾದರಿಯಾಗಿ ಇಟ್ಟು ಮುಂದಿನ ಹೆಜ್ಜೆ ಇಡುವ ಜವಾಬ್ದಾರಿ ಪಕ್ಷ ಮತ್ತು ಸಮಾಜದ ಮೇಲಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಮತ್ತು ಸಾರ್ವಜನಿಕರ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ ಸಾರ್ವ ಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಆರ್ಎಸ್ಎಸ್ ಮುಖಂಡ ರಾ.ಮ.ರವೀಂದ್ರ ಮಾತನಾಡಿ, ಆರು ವರ್ಷ ಗಳ ಕಾಲ ಪ್ರಧಾನಿಯಾಗಿದ್ದ ವಾಜಪೇಯಿ ತನ್ನ ಅವಧಿಯಲ್ಲಿ ಸಂಬಂಧಿಕರಿಗೆ ಯಾವುದೇ ಸರಕಾರಿ ಹುದ್ದೆ ನೀಡುವ ಕೆಲಸ ಮಾಡಿಲ್ಲ. ವಾಜಪೇಯಿ ನಿಷ್ಠಾ ವಂತ ಪ್ರಚಾರಕ ಹಾಗೂ ಸ್ವಯಂ ೇವಕರಾಗಿದ್ದರು ಎಂದು ತಿಳಿಸಿದರು.
ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಪಕ್ಷದ ಹಿರಿಯ ಮುಖಂಡ ಸೋಮಶೇಖರ್ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು.
ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಯಶ್ಪಾಲ್ ಸುವರ್ಣ ವಂದಿಸಿ ದರು. ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಭೆಯಲ್ಲಿ ಸಾರ್ವಜನಿಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಗಲಿದ ಹಿರಿಯ ಚೇತನ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಣೆಗೈದು ಶ್ರದ್ದಾಂಜಲಿ ಸಲ್ಲಿಸಿದರು.