‘ಅಂಗಾಂಗ ದಾನ’ ಜಾಗೃತಿ ಕಾರ್ಯಕ್ರಮ
ಮಂಗಳೂರು, ಆ.17: ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಂಗಳೂರು ಮತ್ತು ವೈದ್ಯಕೀಯ ಸಲಹೆಗಾರರ ಸಂಘಗಳ ಆಶ್ರಯದಲ್ಲಿ ರೀಬರ್ತ್ ಫೌಂಡೇಶನ್ ಪುಣೆ ಸಹಯೋಗದಲ್ಲಿ ‘ಅಂಗಾಂಗ ದಾನ’ ಜಾಗೃತಿ ಕಾರ್ಯಕ್ರಮವನ್ನು ಆ.21ರಂದು ರಾತ್ರಿ 8 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎ ಮಂಗಳೂರು ಅಧ್ಯಕ್ಷ ಡಾ.ಕೆ.ಆರ್.ಕಾಮತ್, ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮವನ್ನು ದಿಲ್ಲಿಯ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಗ ಕಸಿ ಸಂಘಟನೆ(ಎನ್ಒಟಿಟಿಒ)ಯ ಮುಖ್ಯಸ್ಥ ಪ್ರೊ.ವಿಮಲ್ ಭಂಡಾರಿ ಹಾಗೂ ಅಥಿಕಾ ಜೈನ್ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಆ.22ರಂದು ಬೆಳಗ್ಗೆ 10 ಗಂಟೆಗೆ ಐಎಂಎ ಹೌಸ್ನಿಂದ ಸೈಕಲ್ ರ್ಯಾಲಿಗೆ ರೀಬರ್ಥ್ ಫೌಂಡೇಶನ್ನ ರಾಜೇಶ್ ಶೆಟ್ಟಿ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರ್ಯಾಲಿಯು ಮಂಗಳೂರು- ಧರ್ಮಸ್ಥಳ- ಸುಬ್ರಹ್ಮಣ್ಯದಿಂದ ಮತ್ತೆ ಮಂಗಳೂರಿಗೆ ವಾಪಸಾಗಲಿದೆ. ಈ ಮೂಲಕ ಅಂಗಾಂಗಳ ದಾನದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಐಎಂಎ ಮಂಗಳೂರು ಉಪಾಧ್ಯಕ್ಷ ಉಲ್ಲಾಸ್ ಶೆಟ್ಟಿ, ಡಾ.ಸಚ್ಚಿದಾನಂದ ರೈ, ಡಾ.ದಿವಾಕರ್ ರೈ, ತಾಜುದ್ದೀನ್ ಉಪಸ್ಥಿತರಿದ್ದರು.