ಜೋಡುಪಾಲ: 30ಕ್ಕೂ ಹೆಚ್ಚು ಮಂದಿಯ ರಕ್ಷಣೆ
ಸುಳ್ಯ, ಆ. 18: ಜೋಡುಪಾಲ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ 30ಕ್ಕೂ ಹೆಚ್ಚು ಮಂದಿಯನ್ನು ಇಂದು ರಕ್ಷಣೆ ಮಾಡಲಾಗಿದೆ.
ಗುಡ್ಡ ಕುಸಿತದಿಂದ ಸಂತ್ರಸ್ತರು ಮುಣ್ಣಂಗೇರಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ದ.ಕ ಜಿಲ್ಲಾ ಪೊಲೀಸ್, ಎನ್ ಡಿಆರ್ ಎಫ್ ಮತ್ತು ಸುಳ್ಯದ ಸ್ಥಳೀಯರಿಂದ ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ.
ರಕ್ಷಿಸಿದ ಮಹಿಳೆಯರು, ವೃದ್ಧರನ್ನು ಸುಳ್ಯದ ಅರಂತೋಡು ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story