ಕೇರಳ ನೆರೆ ಸಂತ್ರಸ್ತರಿಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ನಂದಿನಿ ತೃಪ್ತಿ ಹಾಲು
ಮಂಗಳೂರು, ಆ. 18: ಕೇರಳ ರಾಜ್ಯದ ಪ್ರಕೃತಿ ವಿಕೋಪದ ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಹಾಲನ್ನು ನೇರವಾಗಿ ಕಾಯಿಸದೆ ಸೇವಿಸಲು ಅನುಕೂಲವಾಗುವಂತೆ 17,000 ಲೀಟರ್ ತೃಪ್ತಿ ಹಾಲಿನ ಪ್ರಥಮ 2 ವಾಹನಗಳಿಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ: ಬಿ.ವಿ. ಸತ್ಯ ನಾರಾಯಣ ಅವರು ಶನಿವಾರ ಚಾಲನೆ ನೀಡಿದರು.
ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಲಿಯು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ತೃಪ್ತಿ ಹಾಲನ್ನು ವಿಶೇಷ ರಿಯಾಯಿತಿ ದರದಲ್ಲಿ ಪಡೆದು, ಕೇರಳ ರಾಜ್ಯದ ನೆರೆ ಸಂತ್ರಸ್ತರಿಗೆ 96,000 ಲೀಟರ್ ತೃಪ್ತಿ ಹಾಲನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿದೆ.
ಅದರಂತೆ ಒಕ್ಕೂಟದ ಸಾಮಾಜಿಕ ಕಳಕಳಿ ಯೋಜನೆಯೊಂದಿಗೆ ತೃಪ್ತಿ ಹಾಲನ್ನು ಲಾಭರಹಿತವಾಗಿ ವಿತರಣೆ ಮಾಡಲು ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುತ್ತದೆ.
Next Story