ಅಡ್ಡೂರು: ಹಿರಿಯ ವಿದ್ವಾಂಸ ಆದಂ ಮುಸ್ಲಿಯಾರ್ ನಿಧನ
ಅಡ್ಡೂರು, ಆ. 18: ಸಮಸ್ತದ ಹಿರಿಯ ವಿದ್ವಾಂಸ ಹಾಗೂ ಗುರುಪುರ-ಅಡ್ಡೂರು ಪರಿಸರದಲ್ಲಿ ‘ಆದಂ ಉಸ್ತಾದ್’ ಎಂದೇ ಚಿರಪರಿಚಿತರಾಗಿದ್ದ ಆದಂ ಮುಸ್ಲಿಯಾರ್ ಅವರು ಹೃದಯಾಘಾತದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಸಮಸ್ತದಲ್ಲಿ 30 ವರ್ಷಕ್ಕಿಂತಲೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಇದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರ ಅಗಲಿಕೆಯು ಸಮಸ್ತಕ್ಕೆ ತುಂಬಲಾರದ ನಷ್ಟ ಎಂದು ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಹಾಗೂ ಅಡ್ಡೂರು ಕ್ಲಸ್ಟರ್ ನ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
Next Story