ಮೂಡುಬಿದಿರೆ : ರಿಕ್ಷಾದಿಂದ ಬಿದ್ದು ಯುವಕ ಮೃತ್ಯು
ಮೂಡುಬಿದಿರೆ, ಆ. 18: ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರು ರಿಕ್ಷಾದಿಂದ ಹೊರ ಎಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಬೆಳುವಾಯಿ ಸಮೀಪದ ಕೆಸರ್ಗದ್ದೆಯಲ್ಲಿ ನಡೆದಿದೆ.
ಕಲ್ಲಬೆಟ್ಟು ನೂಯಿ ನಿವಾಸಿ ವಿಠಲ್ ಬುಣ್ಣನ್ ಅವರ ಪುತ್ರ ಮನೋಹರ (29) ಮೃತ ವ್ಯಕ್ತಿ. ಇವರು ಮೂಡುಮಾರ್ನಾಡಿನ ನಿವಾಸಿ ಹರೀಶ್ ಎಂಬವರ ಆಟೋ ರಿಕ್ಷಾದಲ್ಲಿ ಕಳೆದ ಗುರುವಾರ ರಾತ್ರಿ ಮೂಡುಬಿದಿರೆ ಕಡೆಯಿಂದ ಬೆಳುವಾಯಿ ಕಡೆಗೆ ಪ್ರಯಾಣಿಸುತ್ತಿದ್ದರು. ಕೆಸರ್ಗದ್ದೆ ಸಮೀಪ ಚಾಲಕನ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಮನೋಹರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಕೂಡಲೇ ಇಲ್ಲಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಮನೋಹರ ಚಾಲಕ ಹರೀಶ್ನ ಆಪ್ತ ಸ್ನೇಹಿತ ಎಂದು ತಿಳಿದು ಬಂದಿದೆ.
Next Story