ನೆರೆ ಸಂತ್ರಸ್ಥರ ನಿಧಿ ಸಂಗ್ರಹ ಕೇಂದ್ರಕ್ಕೆ ಚಾಲನೆ
ಕುಂದಾಪುರ, ಆ.19: ಭೀಕರ ಪ್ರವಾಹಕ್ಕೆ ತತ್ತರಿಸಿರುವ ಕೊಡಗು ಹಾಗೂ ಕೇರಳ ರಾಜ್ಯದ ನೆರೆ ಸಂತ್ರಸ್ಥರ ಸಹಾಯಾರ್ಥವಾಗಿ ನಿಧಿ ಸಂಗ್ರಹಿಸಲು ಜೆಸಿಐ ಕುಂದಾಪುರ ಸಿಟಿ ಹಾಗೂ ಸ್ಪಂದನ ಖಾಸಗಿ ವಾಹಿನಿಯ ವತಿಯಿಂದ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ರಸ್ತೆಯ ಹ್ಯಾರೀ ಪೋಟರ್ ಶಾಪ್ ಸಮೀಪ ಆರಂಭಿಸಲಾಗಿರುವ ನಿಧಿ ಸಂಗ್ರಹ ಕೇಂದ್ರಕ್ಕೆ ರವಿವಾರ ಚಾಲನೆ ನೀಡಲಾಯಿತು.
ಕೇಂದ್ರವನ್ನು ಕುಂದಾಪುರದ ಅಡ್ವೋಕೆಟ್ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಕುಂದಾಪುರ ಮಾತ್ರವಲ್ಲದೆ ಉಡುಪಿ ಹಾಗೂ ಮಂಗಳೂರಿ ನಲ್ಲಿಯೂ ನಿಧಿ ಸಂಗ್ರಹ ಕೇಂದ್ರವನ್ನು ತೆರೆಯಲಾಗಿದೆ. ಆ.20ರಂದು ಕುಂದಾ ಪುರದ ವಿವಿಧ ಮಳಿಗೆಗಳಿಗೆ ತೆರಳಿ ನಿಧಿ ಸಂಗ್ರಹ ಮಾಡಲಾಗುತ್ತದೆ.
ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಜಯಚಂದ್ರ ಶೆಟ್ಟಿ, ಕಾರ್ಯದರ್ಶಿ ಅಭಿಲಾಷ್, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವುಡ, ಶ್ರೀಕರ ಸುವರ್ಣ, ನಾಗೇಂದ್ರ ಪೈ, ಸದಸ್ಯರಾದ ನಾಗೇಶ್ ನಾವುಡ, ಪ್ರಶಾಂತ್ ಹವಲ್ದಾರ್, ಬಿಂದು ತಂಗಪ್ಪನ್, ಕಾರ್ತಿಕ್, ದಿನೇಶ್ ಕುಂದರ್, ಸ್ಥಳೀಯರಾದ ನಜೀರ್, ಸದಾನಂದ ಹವಲ್ದಾರ್, ಶ್ರೀಕಾಂತ್, ಉದ್ಯಮಿ ಅಬ್ದುಲ್ಲಾ ಉಪಸ್ಥಿತರಿದ್ದರು.