ಗುರುಕಂಬಳ: ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದರು !
ವೀಡಿಯೊ ವೈರಲ್
ಮಂಗಳೂರು, ಆ.19: ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬರನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಗುರುಕಂಬಳದಲ್ಲಿ ರವಿವಾರ ನಡೆದಿದೆ.
ಕಾಟಿಪಳ್ಳ ನಿವಾಸಿ ಹಂಝ (63) ಹಲ್ಲೆಗೊಳಗಾದವರು.
ಹಂಝ ತನ್ನ ಸ್ನೇಹಿತ ತೌಸೀಫ್ ತಂಗಿಯ ಮದುವೆ ಸಾಲ ತೀರಿಸುವುದಕ್ಕಾಗಿ ಹಣ ಸಂಗ್ರಹಿಸಲು ಗುರುಕಂಬಳದ ಮನೆಗಳಿಗೆ ತೆರಳಿದ್ದರು. ಈ ವೇಳೆ ಗುಂಪೊಂದು ಇವರನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಹಲ್ಲೆ ನಡೆಸಿದೆ.
ಮಾಹಿತಿ ಪಡೆದ ಪೊಲೀಸರು ವ್ಯಕ್ತಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story