ಕೆರೆಗೆ ಬಿದ್ದು ಮಹಿಳೆ ಮೃತ್ಯು
ಗಂಗೊಳ್ಳಿ, ಆ.20: ಮಹಿಳೆಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಆ.20ರಂದು ಬೆಳಗ್ಗೆ ನಾಡಾ ಗ್ರಾಮದ ಚುಂಗಿಗುಡ್ಡೆ ಎಂಬಲ್ಲಿ ನಡೆದಿದೆ.
ಮೃತರನ್ನು ಚುಂಗಿಗುಡ್ಡೆಯ ಲಕ್ಷ್ಮೀ(40) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ನಾಡಾ ಪೇಟೆಗೆ ಹೋಗುತ್ತಿದ್ದಾಗ ಚುಂಗಿಗುಡ್ಡೆಯ ರಾಮ ಹೆಬ್ಬಾರ್ ಎಂಬವರ ಜಾಗದಲ್ಲಿರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story