ಆ.24: ಮಂಗಳೂರಿನಲ್ಲಿ ಕೆಸಿಎಫ್ ಸಮಾವೇಶ
ಮಂಗಳೂರು, ಆ. 23: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇಂಟರ್ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಕೆಸಿಎಫ್ ಅನಿವಾಸಿ ಘಟಕಗಳ ಊರಿನಲ್ಲಿರುವ ಕಾರ್ಯಕರ್ತರ ಸಮಾವೇಶವು ಆ. 24ರಂದು ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆಯ ತನಕ ಮಂಗಳೂರು ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ಪ್ರಮುಖ ವ್ಯಕ್ತಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ಪ್ರಖ್ಯಾತ ತರಬೇತುದಾರ ಪ್ರೊಫೆಸರ್ ಸರ್ಫರಾಝ್ ಹಾಶಿಂ ಅವರಿಂದ ವ್ಯಕ್ತಿತ್ವ ವಿಕಾಸ ಬೋಧನೆ ನಡೆಯಲಿದೆ ಹಾಗೂ ವಿವಿಧ ವಿಷಯಗಳಲ್ಲಿ ಉಪನ್ಯಾಸ ಹಾಗೂ ಚರ್ಚೆ ನಡೆಯಲಿದೆ.
ಸಂಬಂಧ ಪಟ್ಟವರು ಕಾರ್ಯಕ್ರಮದಲ್ಲಿ ಕ್ಲಪ್ತ ಸಮಯಕ್ಕೆ ಭಾಗವಹಿಸಬೇಕೆಂದು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಪಿಎಂಎಚ್ ಈಶ್ವರಮಂಗಲ ತಿಳಿಸಿದ್ದಾರೆ.
Next Story