ಕೇರಳ ಪ್ರವಾಹ: ಪುನರ್ವಸತಿ ಕೆಲಸಕ್ಕಾಗಿ ತೆರಳಿದ ಜಮಾಅತೆ ಇಸ್ಲಾಮೀ ಹಿಂದ್ ತಂಡ
ಮಂಗಳೂರು, ಆ. 24: ಭೀಕರ ಜಲಪ್ರವಾಹಕ್ಕೆ ತುತ್ತಾಗಿ ಸಹಜಸ್ಥಿತಿಗೆ ಮರಳುತ್ತಿರುವ ಕೇರಳ ರಾಜ್ಯದ ನಿರಾಶ್ರಿತರ ಶಿಬಿರದಲ್ಲಿರುವ ಲಕ್ಷಾಂತರ ಜನರ ಪುನರ್ವಸತಿಯ ಕೆಲಸಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಸಮಾಜ ಸೇವಾ ಸಂಸ್ಥೆ ಎಚ್.ಆರ್.ಎಸ್. (ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ) ಇದರ ರಾಜ್ಯದ ವಿವಿಧ ಭಾಗಗಳ ಸ್ವಯಂಸೇವಕರು ಶುಕ್ರವಾರ ಬೆಳಗ್ಗೆ 11.40ರ ಟ್ರೈನ್ ನಲ್ಲಿ ಕೇರಳಕ್ಕೆ ತೆರಳಿದರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾರ್ಗದರ್ಶನ ನೀಡಿದರು.
ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಯೂಸುಫ್ ಪಕ್ಕಲಡ್ಕ, ಆಸಿಫ್ ಕುದ್ರೋಳಿ ಉಪಸ್ಥಿತರಿದ್ದರು. ಎಚ್.ಆರ್.ಎಸ್.ನ ಝೋನ್ ಕ್ಯಾಪ್ಟನ್ ಅಮೀರ್ ಕುದ್ರೋಳಿ ತಂಡದ ನೇತೃತ್ವ ವಹಿಸಿದ್ದಾರೆ.
Next Story