ಮಂಗಳೂರು: ವೇತನ ನೀಡದೆ ವಂಚನೆ ದೂರು
ಮಂಗಳೂರು, ಆ.24: ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕರು ವೇತನ ನೀಡದೆ ವಂಚಿಸಿದ್ದು, ನ್ಯಾಯ ದೊರಕಿಸಿ ಕೊಡಬೇಕು ಎಂದು ಕಾವೂರು ಮುಲ್ಲಕಾಡು ನಿವಾಸಿ ಹರಿಶ್ಚಂದ್ರ ಎಂಬವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಜೈಯಲ್ಲಿ ಮೀರಾ ಲೆವಿಸ್ ಮಾಲಕತ್ವದ ಫರ್ನಿಚರ್ ಅಂಗಡಿಯಲ್ಲಿ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದು, 1 ತಿಂಗಳು 16 ದಿನದ ವೇತನ ಬಾಕಿ ಇರಿಸಿದ್ದಾರೆ. ವೇತನ ಕೇಳಲು ಹೋದಾಗ ಉಡಾಫೆಯಿಂದ ವರ್ತಿಸಿ, ಬೈದು ಕಳುಹಿಸಿದ್ದಾರೆ. ನ್ಯಾಯಯುತವಾಗಿ ಬರಬೇಕಾದ ವೇತನವನ್ನು ತೆಗೆಸಿ ಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story