ಅಂದರ್ ಬಾಹರ್: ಮೂವರ ಸೆರೆ
ಕಾರ್ಕಳ, ಆ.24: ಹಿರ್ಗಾನ ಗ್ರಾಮದ ಗುಂಡ್ಯಡ್ಕ ಬಳಿ ಆ.23ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಅಲ್ಪಾಜ್, ಸಂತೋಷ, ಶಿವಾನಂದ ಬಂಧಿತ ಆರೋಪಿಗಳು. ಭೋಜ ಪೂಜಾರಿ, ರವಿ ಶೆಟ್ಟಿ, ರಫೀಕ್, ಪ್ರದೀಪ್ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 4,190ರೂ. ನಗದು, ಕಾರು, ಸ್ಕೂಟರ್ ಮತ್ತು ಮೂರು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story