ಯುಪಿಸಿಎಲ್ನಿಂದ ವಿದ್ಯಾರ್ಥಿಗಳಿಗೆ ಸಸಿಗಳ ವಿತರಣೆ
ಉಡುಪಿ, ಆ.24: ಯುಪಿಸಿಎಲ್ ಅದಾನಿ ಫೌಂಡೇಷನ್ ವತಿಯಿಂದ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಸ್ಥಾವರದ ಸುತ್ತಮುತ್ತಲಿನ ಸರಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣಿನ ಸಸಿಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ 74 ಸರಕಾರಿ ಶಾಲೆಗಳ ಸುಮಾರು 6500 ವಿದ್ಯಾರ್ಥಿಗಳಿಗೆ ತಲಾ ಎರಡು ಫಲ ನೀಡುವ ಸಸಿಗಳು ಸೇರಿದಂತೆ ಒಟ್ಟು 13000 ಸಸಿಗಳನ್ನು ವಿತರಿಸಿದರು. ಈಗಾಗಲೇ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ಹಸಿರು ಕರ್ನಾಟಕ ಯೋಜನೆಗೆ ಅದಾನಿ ಯುಪಿಸಿಎಲ್ ಕೈಜೋಡಿಸಿದ್ದು, 50,000 ಸಸಿಗಳನ್ನು ನೆಡುವ ಗುರಿ ಹೊಂದಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.
Next Story