ಪೌರಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ದಿನೇಶ್ ಗುಂಡೂರಾವ್
ಮಂಗಳೂರು, ಆ.25: ಕಾಂಗ್ರೆಸ್ ಸರಕಾರವು ಕೊಟ್ಟಿರುವಂತಹ ಅನೇಕ ಜನಪರ ಕಾರ್ಯಗಳನ್ನು ಜನರು ಇನ್ನೂ ಮರೆತಿಲ್ಲ. ಕಾಂಗ್ರೆಸ್ ಸೋಲಿಗೆ ಅಭಿವೃದ್ಧಿಯ ಹಿನ್ನಡೆ ಕಾರಣ ಎಂಬ ಮಾತು ಎಲ್ಲೂ ಕೇಳಿ ಬಂದಿಲ್ಲ. ಇಂದು ಎಲ್ಲೆಡೆಯೂ ಸಿದ್ದರಾಮಯ್ಯರ ಭಾಗ್ಯಗಳನ್ನು ಜನತೆ ಅನುಭವಿಸಿ ಅರ್ಥ ಮಾಡಿಕೊಂಡಿರುವುದರಿಂದ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಅಭಿವೃದ್ಧಿಯ ಹೆಸರಿನಲ್ಲಿ ಮತ ಯಾಚಿಸುವಂತೆ ಕರೆ ನೀಡಿದ ದಿನೇಶ್ ಗುಂಡೂರಾವ್, ಸಮ್ಮಿಶ್ರ ಸರಕಾರವು 5 ವರ್ಷ ಪೂರ್ಣಗೊಳಿಸುತ್ತದೆ. ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸಲಿದೆ. ಭ್ರಷ್ಟಾಚಾರವಿಲ್ಲದ, ಸಮಾಜವನ್ನು ಬೇರ್ಪಡಿಸದ, ಅನೈತಿಕ ರಾಜಕಾರಣ ಮಾಡದ ಕಾಂಗ್ರೆಸ್ಗೆ ಜನತೆ ಖಂಡಿತಾ ಆಶೀರ್ವಾದ ನೀಡಲಿದ್ದಾರೆ. ಜನತೆಯ ಈ ತೀರ್ಮಾನಕ್ಕೆ ಬದ್ಧರಾಗಿರಬೇಕು. ರಾಜ್ಯದ ಪರಿಸ್ಥಿತಿ ಗಮನಿಸಿಕೊಂಡು ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಲು ಜೆಡಿಎಸ್ ಜೊತೆ ಸೇರುವಂತಾಯಿತು. ಅದರಲ್ಲೂ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ತ್ಯಾಗ ಮಾಡಿದ್ದು, ಪಕ್ಷದ ಮನೋಭಾವಕ್ಕೆ ಸಾಕ್ಷಿಯಾಯಿತು ಎಂದರು.
ಈ ಸಂದರ್ಭ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಪರಿಹಾರ ನೆರವು ಕೋರಿ ಸರಕಾರವನ್ನು ಒತ್ತಾಯಿಸಲು ಮನವಿ ಪತ್ರವೊಂದನ್ನು ದಿನೇಶ್ ಗುಂಡೂರಾವ್ಗೆ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಮೇಯರ್ ಭಾಸ್ಕರ್ ಮೊಯ್ಲಿ, ಉಪಮೇಯರ್ ಮುಹಮ್ಮದ್ ಕುಂಜತ್ಬೈಲ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಪಕ್ಷದ ಮುಖಂಡರಾದ ಪಿ.ವಿ. ಮೋಹನ್, ಇಬ್ರಾಹೀಂ ಕೋಡಿಜಾಲ್, ಜಿ.ಎ. ಬಾವ, ಮಿಥುನ್ ರೈ, ಕವಿತಾ ಸನಿಲ್, ಮಮತಾ ಗಟ್ಟಿ, ಕೆ.ಹರಿನಾಥ್, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೊ, ನವೀನ್ ಡಿಸೋಜ, ರಾಜಶೇಖರ್ ಕೋಟ್ಯಾನ್, ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ವೆಂಕಪ್ಪಗೌಡ, ಯು.ಬಿ. ಸಲೀಂ, ಎನ್.ಎಸ್. ಕರೀಂ, ಅಬ್ದುರ್ರವೂಫ್, ಎ.ಸಿ.ವಿನಯರಾಜ್, ಆಶಾ ಡಿಸಿಲ್ವಾ, ಅಪ್ಪಿ, ಡಿ.ಕೆ. ಅಶೋಕ್, ಹಿಲ್ಡಾ ಆಳ್ವ, ಶೇಖರ್ ಕುಕ್ಕೇಡಿ, ಬ್ಲಾಕ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಧನಂಜಯ ಮಟ್ಟು, ಪ್ರಶಾಂತ್ ಕಾಜವ, ಜಯಪ್ರಕಾಶ್ ರೈ, ದಿವಾಕರ್ ಗೌಡ, ಮಂಜುಳಾ ಮಾಧವ ಮಾವೆ, ಆರ್.ಕೆ ಪೃಥ್ವಿರಾಜ್, ಲೋಕೇಶ್ ಹೆಗ್ಡೆ, ಪದ್ಮನಾಭ ನರಿಂಗಾನ, ಬಿ.ಎಂ.ಭಾರತಿ, ಬಿ.ಎ.ಮುಹಮ್ಮದ್ ಹನೀಫ್, ನೀರಜ್ಪಾಲ್, ಖಾಲಿದ್ ಉಜಿರೆ, ಪ್ರೇಮ್ ಬಳ್ಳಾಲ್ಬಾಗ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
ದ.ಕ. ಜಿಪಂ ಸದಸ್ಯ ಕೆ.ಕೆ.ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.