ಪ್ರವಾಹ ಪೀಡಿತ ಕೇರಳ ಜನತೆಗೆ ಬಜ್ಪೆ ನಿವಾಸಿಗಳಿಂದ ನೆರವಿನ ಹಸ್ತ
ಮಂಗಳೂರು, ಆ. 25: ಪ್ರವಾಹ ಪೀಡಿತ ಕೇರಳ ಜನತೆಗೆ ನೆರವಿನ ಹಸ್ತವಾಗಿ ಬಜ್ಪೆ ಪರಿಸರದ ಉದ್ಯಮಿ ಹಾಗೂ ಇನ್ನಿತರ ನಾಗರಿಕರ ವತಿಯಿಂದ 1,200 ಪಿನಾಯಿಲ್, ಬೆಡ್ ಶೀಟ್, ಬಕೆಟ್, ಟಾಯ್ಲೆಟ್ ಬ್ರೆಶ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಉದ್ಯಮಿ ಚೈನಾ ಬಝಾರ್ ಸಿದ್ದೀಕ್ ನೇತೃತ್ವದಲ್ಲಿ ಸಂಗ್ರಹಿಸಲಾಯಿತು.
ಈ ಸಂದರ್ಭ ಬಜ್ಪೆ ನಿವಾಸಿ ಇಸ್ಮಾಯಿಲ್ ಇಂಜಿನಿಯರ್, , ಹೊಟೇಲ್ ನಿಸರ್ಗ ಮಾಲಕ ರಿಯಾಝ್ ಹರೆಕಳ ಮತ್ತು ಬಜ್ಪೆ ಪರಿಸರದ ನಾಗರಿಕರು ನೆರವು ನೀಡುವ ಮೂಲಕ ಕೇರಳದ ನಿರಾಶ್ರಿತರ ಪಾಲಿಗೆ ಆಶಾಕಿರಣವಾಗಿದ್ದಾರೆ.
ಕೇರಳದಲ್ಲಿ ಭೀಕರವಾಗಿ ಜಲಾವೃತ ತಾಂಡವಾಡುತ್ತಿದೆ. ಹಲವಾರು ಪ್ರದೇಶಗಳು ಜಲಾವೃತವಾಗಿ ಜನರು ನೆಲೆಯನ್ನು ಕಳೆದುಕೊಂಡಿದ್ದರೆ, ಅದಕ್ಕಿಂತ ಭೀಕರವಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿ ಜನರು ಸರ್ವವನ್ನೂ ಕಳೆದುಕೊಂಡು ಹತ್ತಾರು ನಿರಾಶ್ರಿತ ಶಿಬಿರಗಳಲ್ಲಿ ವಾಸವಾಗಿದ್ದಾರೆ ಇಂತಹ ಜನರಿಗೆ ನಾವು ಮಾಡುವ ಈ ಪುಟ್ಟ ಸಹಾಯ ಸಹಕಾರಿಯಾಗಲಿ ಎಂದು ಹೇಳಿದರು.
Next Story