ಆ.27: ರಂಗಭೂಮಿಯಿಂದ ‘ಮಾರಿಕಳೆ’ ನಾಟಕ
ಉಡುಪಿ, ಆ.25: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಚಿಣ್ಣರ ಚಿಲುಮೆ ಮಕ್ಕಳ ನಾಟಕ ಕಾರ್ಯಕ್ರಮದ ಅಂಗವಾಗಿ ಉಡುಪಿ ರಂಗ ಭೂಮಿಯ ಮಕ್ಕಳ ತಂಡದಿಂದ ಪ್ರಶಾಂತ್ ಅನಂತಾಡಿ ರಚಿಸಿ, ರವಿರಾಜ್ ಹೆಚ್.ಪಿ. ನಿರ್ದೇಶನದ ‘ಮಾರಿಕಳೆ’ ನಾಟಕ ಆ.27ರ ಸೋಮವಾರ ಸಂಜೆ 6:30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ವುಂಟಪದಲ್ಲಿ ಪ್ರದರ್ಶನ ಗೊಳ್ಳಲಿದೆ.
ಎಂಜಿಎಂ ಕಾಲೇಜು ಹಾಗೂ ರೋಟರಿ ಉಡುಪಿಯ ಸಹಕಾರದೊಂದಿಗೆ ನಡೆಯುವ ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ರಂಗಭೂಮಿ ಪ್ರಕಟಣೆ ತಿಳಿಸಿದೆ.
Next Story