ಉಮೇಶ್ ನಿರ್ಮಲ್ರಿಗೆ ಜೇಸಿ ವಲಯ 15ರ "ಸಾಧನಾಶ್ರೀ ಪ್ರಶಸ್ತಿ"
ಬಂಟ್ವಾಳ, ಆ. 26: ಜೇಸಿ ವಲಯ 15ರ ವ್ಯವಹಾರ "ಪ್ರಗತಿ" ಸಮ್ಮೇಳನ ಪುತ್ತೂರು ಸಮೀಪದ ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಶನಿವಾರ ಜರಗಿತು.
ಜೇಸಿಐ ಜೋಡುಮಾರ್ಗ ನೇತ್ರಾವತಿಯ ನಾಮಿನಿ ಜೇಸಿಐ ಸೆನೆಟರ್ ಉಮೇಶ್ ನಿರ್ಮಲ್ ಅವರ ವ್ಯವಹಾರ ಹಾಗೂ ಜೇಸಿಯಲ್ಲಿನ ಸಾಧನೆಗಾಗಿ ಜೇಸಿ ವಲಯ 15ರ ಸಾಧನಾಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜೇಸಿ ವಲಯ 15ರ ವಲಯಾಧ್ಯಕ್ಷ ರಾಕೇಶ್ ಕುಂಜೂರ್ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ವಲಯ 15ರ ಪ್ರಥಮ ಮಹಿಳೆ ಸೌಮ್ಯ ರಾಕೇಶ್, ವಲಯ ಉಪಾಧ್ಯಕ್ಷ ಪಶುಪತಿ ಶರ್ಮ, ರಾಘವೇಂದ್ರ ಪ್ರಭು, ವಲಯ ಕಾರ್ಯದರ್ಶಿ ಸುಧಾಕರ್ ಕಾರ್ಕಳ, ಜೇಸಿಐ ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ, ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷೆ ಸವಿತಾ ನಿರ್ಮಲ್, ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಉಪಸ್ಥಿತರಿದ್ದರು.
Next Story