ಮಂಗಳೂರು: ನೂತನ ಬಿಷಪರ ಅಧಿಕಾರ ಸ್ವೀಕಾರ ಕಾರ್ಯಕ್ರಮದ ‘ಚಪ್ಪರ’ ನಿರ್ಮಾಣಕ್ಕೆ ಚಾಲನೆ
ಮಂಗಳೂರು, ಆ.27: ಮಂಗಳೂರಿನ ನೂತನ ಬಿಷಪ್ ವಂ. ಫಾ. ಪೀಟರ್ ಪೌಲ್ ಸಲ್ದಾನ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದ ‘ಚಪ್ಪರ’ ನಿರ್ಮಾಣಕ್ಕೆ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಸೋಮವಾರ ನಗರದ ರೊಝಾರಿಯೊ ಚರ್ಚ್ ವಠಾರದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸುಮಾರು 22 ವರ್ಷಗಳ ಕಾಲ ಮಂಗಳೂರು ಧರ್ಮಪ್ರಾಂತದ ಬಿಷಪ್ ಆಗಿ ಸೇವೆ ಸಲ್ಲಿಸಲು ಎಲ್ಲರೂ ಸಹಕರಿಸಿದ್ದಾರೆ. ನೂತನ ಬಿಷಪ್ಗೂ ಇದೇ ಮಾದರಿಯ ಸಹಕಾರ ನೀಡುವ ಮೂಲಕ ಸೌಹಾರ್ದ ಸಮಾಜ ನಿರ್ಮಿಸಲು ಅಣಿಯಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಒಂದು ಸಮುದಾಯದ ಹಿತಚಿಂತಕರಾಗಿರಲಿಲ್ಲ. ಸಮಸ್ಯೆ, ಸವಾಲುಗಳು ಎದುರಾದಾಗಲೆಲ್ಲಾ ಅವರು ಸಮಾಜದ ಎಲ್ಲರೊಂದಿಗೂ ಬೆರೆತು ಪರಿಹಾರಕ್ಕೆ ಮುಂದಾಗುತ್ತಿದ್ದರು. ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಅವರ ಪಾತ್ರ ಅಪಾರವಾಗಿತ್ತು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ಗಳಾದ ಲತೀಫ್ ಕಂದುಕ, ನವೀನ್ ಡಿಸೋಜ, ಫಾ. ಓನಿಲ್ ಡಿಸೋಜ, ಬಿಷಪ್ ಹೌಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ವಿಕ್ಟರ್ ವಿಜಯ್ ಲೋಬೊ, ವಿಲ್ಸೆನ್ ಮೊಂತೆರೋ, ಕಾರ್ಯಕ್ರಮದ ವಿವಿಧ ಸಮಿತಿಗಳ ಸಂಚಾಲಕರಾದ ಜೆ.ಬಿ. ಕಾಸ್ತಾ, ವಿಲ್ಸೆನ್ ಮೊಂತೆರೋ, ಎಂ.ಪಿ.ನೊರೊನ್ಹಾ, ಲೂಯಿ ಜೆ.ಪಿಂಟೋ ಮತ್ತಿತರರಿದ್ದರು.
ಈ ಚಪ್ಪರವು ಸುಮಾರು 75 ಸಾವಿರ ಚ.ಅ. ವಿಸ್ತೀರ್ಣ ಹೊಂದಿದ್ದು, ಇದರ ವೇದಿಕೆಯು 4 ಸಾವಿರ ಚ.ಅ. ವಿಸ್ತೀರ್ಣವನ್ನು ಆವರಿಸಲಿದೆ.