ಮಂಗಳೂರು ನಿಯೋಜಿತ ಬಿಷಪ್ರನ್ನು ಭೇಟಿಯಾದ ಭೋಜೇಗೌಡ
ಮಂಗಳೂರು, ಆ.28: ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆ ಗೌಡ ಅವರು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ನಿಯೋಜಿತ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಅವರನ್ನು ಜೆಪ್ಪು ಸೆಮಿನರಿಯಲ್ಲಿ ಭೇಟಿಯಾಗಿ ಶುಭಾಶಯ ಕೋರಿದರು.
ಈ ಸಂದರ್ಭ ಧರ್ಮಪ್ರಾಂತದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭೋಜೇಗೌಡ, ಸರಕಾರದ ವತಿಯಿಂದ ಕ್ರೈಸ್ತ ಸಮುದಾಯಕ್ಕೆ ಸೂಕ್ತ ಸೌಲಭ್ಯ ಸಿಗುವಂತಾಗಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಜೆಡಿಎಸ್ ಮುಖಂಡ ಸುಶೀಲ್ ನೊರೊನ್ಹ ಜೊತೆಗಿದ್ದರು.
Next Story