ಆ. 30: ವಿಚಾರವಾದಿ ಸಂಘಗಳ ಸಹಭಾಗಿತ್ವದಲ್ಲಿ ಕುಲದೀಪ್ ನಯ್ಯರ್ ಗೆ ನುಡಿ ನಮನ
ಮಂಗಳೂರು, ಆ. 28: ಇತ್ತೀಚೆಗೆ ನಿಧನರಾದ ಖ್ಯಾತ ಪತ್ರಕರ್ತ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಗಾರ, ಪ್ರಬಲ ಜಾತ್ಯಾತೀತವಾದಿ, ಸ್ವಾತಂತ್ರ್ಯ ಭಾರತದ ಪ್ರಮುಖ ಘಟನೆಗಳ ಪ್ರತ್ಯಕ್ಷದರ್ಶಿಯಾಗಿದ್ದ ಕುಲದೀಪ್ ನಯ್ಯರ್ ರಿಗೆ ಮಂಗಳೂರಿನ ನಾಗರಿಕರ ಪರವಾಗಿ ಆ. 30ರಂದು ಸಂಜೆ 5 ಕ್ಕೆ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿವೈಎಫ್ಐ, ಡಿಎಸ್ಎಸ್ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಎಸ್ಎಫ್ಐ, ಎಐವೈಎಫ್, ಅಭಿಮತ ಮಂಗಳೂರು, ಸಮುದಾಯ, ದ.ಕ. ಜಿಲ್ಲಾ ವಿಚಾರವಾದಿ ಸಂಘ ಇವುಗಳ ಸಹಭಾಗಿತ್ವದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ.
ಹಿರಿಯ ಚಿಂತಕ ಜಿ. ರಾಜಶೇಖರ, ಮಣಿಪಾಲ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ, ಮಾಹೆ ಇದರ ನಿರ್ದೇಶಕರಾದ ವರದೇಶ ಹಿರೇಗಂಗೆ ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘಟಕರಾದ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901099183 ಸಂಪರ್ಕಿಸಬಹುದು.
Next Story