ಸೆ.1ರಂದು ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಹುತಾತ್ಮ ದಿನಾಚರಣೆ
ಕಾಸರಗೋಡು, ಆ.28: ಭೂಮಾಲಕ ಗುಂಡಿಗೆ ಬಲಿಯಾದ ಪೈವಳಿಕೆ ಹುತಾತ್ಮ ಸಹೋದರರಾದ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ ಹಾಗೂ ಚೆನ್ನಪ್ಪಶೆಟ್ಟಿಯವರ 60ನೇ ಹುತಾತ್ಮ ದಿನಾಚರಣೆ ಸೆಪ್ಟಂಬರ್ 1ರಂದು ನಡೆಯಲಿದೆ.
ದಿನಾಚರಣೆಯಂಗವಾಗಿ ಅಂದು ಬೆಳಗ್ಗೆ ಪೈವಳಿಕೆ ಬೋಳಂಗಳ ಹುತಾತ್ಮ ಸ್ಮತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಯಲಿದೆ. ಅಪರಾಹ್ನ ಮೂರು ಗಂಟೆಗೆ ಕಾಯರ್ಕಟ್ಟೆಯಿಂದ ರ್ಯಾಲಿ ನಡೆಯಲಿದೆ. ನಾಲ್ಕು ಗಂಟೆಗೆ ಪೈವಳಿಕೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ರಾಜ್ಯ ವಿದ್ಯುತ್ ಸಚಿವ ಎಂ.ಎಂ.ಮಣಿ ಉದ್ಘಾಟಿಸುವರು.
ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾದ ಕೆ.ಪಿ.ಸತೀಶ್ಚಂದ್ರನ್, ಸಿ.ಎಚ್.ಕುಂಞಬು, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿ.ಪಿ.ಪಿ.ಮುಸ್ತಫ, ಕೆ.ಆರ್.ಜಯಾನಂದ, ಸಾಬು ಅಬ್ರಹಾಂ, ಸಿಪಿಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಅಬ್ದುರ್ರಝಾಕ್ ಚಿಪ್ಪಾರ್, ರೈತ ಸಂಘದ ಮುಖಂಡ ಎ.ಅಬೂಬಕರ್, ಕೆ.ನಾರಾಯಣ ಶೆಟ್ಟಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ ಸಭೆ ಪೈವಳಿಕೆ ಹುತಾತ್ಮ ಮಂದಿರದಲ್ಲಿ ಜರುಗಿತು.
ಪಿ.ಕೆ.ಅಹ್ಮದ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಅಬ್ದುರ್ರಝಾಕ್ ಚಿಪ್ಪಾರ್, ನಾರಾಯಣ ಶೆಟ್ಟಿ, ಸಂಚಾಲಕ ಸದಾನಂದ ಕೋರಿಕ್ಕಾರ್, ಶ್ಯಾಮ್ ಭಟ್, ಬಶೀರ್ ದೇವಕಾನ, ಶಂಕರ ಎ., ಸತ್ಯನಾರಾಯಣ ಶೆಟ್ಟಿ, ಅಬ್ದುಲ್ ಹಾರಿಸ್ಮೊದಲಾದವರು ಉಪಸ್ಥಿತರಿದ್ದರು.