ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ
ಮಂಗಳೂರು, ಆ.28: ಗ್ರಾಮಾಂತರ ಪ್ರದೇಶದ ಯಕ್ಷ ಬಾಲಪ್ರತಿಭೆಗಳನ್ನು ಗುರುತಿಸಿ ಯಕ್ಷಗಾನ, ತಾಳಮದ್ದಲೆ ತರಬೇತಿಗೊಳಿಸಿ ತನ್ಮೂಲಕ ಪ್ರದರ್ಶನ ಗೊಳಿಸುವುದು ಕನ್ನಡ ನಾಡುನುಡಿಗೆ ಸಲ್ಲಿಸುತ್ತಿರುವ ಸೇವೆಯಾಗಿದೆ ಎಂದು ಅಖಿಲ ಭಾರತ ತುಳು ಒಕ್ಕೂ ಟದ ಕೋಶಾಧಿಕಾರಿ ಮುಲ್ಕಿ ಕರುಣಾ ಕರ ಶೆಟ್ಟಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಂಗಸ್ಪಂದನ (ರಿ) ಮಂಗಳೂರು ವತಿಯಿಂದ ಕಾವೂರು ಪದವಿನ ಶ್ರೀ ಗುರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಸಭಾಭವನದಲ್ಲಿ ನಡೆದ ‘ಮುಂಗಾರು ರಂಗ ಸಂಭ್ರಮ’ದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ದಿನಕರ ಎಸ್. ಪಚ್ಚನಾಡಿ, ದೈವಸ್ಥಾನದ ಗುರಿಕಾರ ಕುಸುಮಾಕರ್, ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಕರ್ಕೆರಾ, ಶ್ರೀ ಕಚ್ಚೂರ ಮಾಲ್ದಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಎಂ.ಸಿ. ಕುಮಾರ್, ಕಾರ್ಯದರ್ಶಿ ಸಚಿನ್ಪಾಲ್ ಮಾತನಾಡಿದರು.
ರಂಗಸ್ಪಂದನದ ಸಂಚಾಲಕ ವಿ.ಜಿ.ಪಾಲ್ ಸ್ವಾಗತಿಸಿದರು. ಹರೀಶ್ ಕುಮಾರ್ ಕಾವೂರು ವಂದಿಸಿದರು. ನಿವೇದಿತಾ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.