ಸೆ.4, 5ರಂದು ಶಿರೂರು ಶ್ರೀ ಆರಾಧನಾ ಮಹೋತ್ಸವ
ಉಡುಪಿ, ಆ.28: ಶಿರೂರು ಮೂಲಮಠವನ್ನು ಪೊಲೀಸರು ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ವೃಂದವನಾಸ್ಥ ರಾಗಿರುವ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಆರಾಧನಾ ಮಹೋತ್ಸವವನ್ನು ಸೆ.4 ಮತ್ತು 5ರಂದು ನಡೆಸಲು ನಿರ್ಧರಿಸಲಾಗಿದೆ.
ಸೆ. 4ರಂದು ಹೋಮ ಹವನ ನಡೆದರೆ, 5ರಂದು ಆರಾಧನಾ ಮಹೋತ್ಸವ ವನ್ನು ನಡೆಸಲಾಗುತ್ತದೆ. ಅಂದು ಸುಮಾರು 300 ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಠದ ಮೂಲಗಳು ತಿಳಿಸಿವೆ. ಈ ಸಂಬಂಧ ಮೂಲ ಮಠ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.
Next Story