ಮಂಗಳೂರು: ಐವನ್ ಡಿಸೋಜ ನೇತೃತ್ವದಲ್ಲಿ ನೆರೆ ಪರಿಹಾರ
ಮಂಗಳೂರು, ಆ.28: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಕೊಡಗು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ 45 ಮೂಟೆ ಅಕ್ಕಿ, ಬಟ್ಟೆಗಳು ಬೆಡ್ಶೀಟ್ಗಳು ಧವಸಧಾನ್ಯಗಳು, ತಿಂಡಿ ತಿನಿಸುಗಳು ನೀರಿನ ಬಾಟಲಿಗಳು ರವಾನೆ ಮಾಡಲಾಯಿತು.
ಇತ್ತೀಚೆಗೆ ಬಂದಂತಹ ವಿಪರೀತ ಗಾಳಿ-ಮಳೆಗೆ ಕೊಡಗು ಜಿಲ್ಲೆಯಲ್ಲಿರುವ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ನೀಡುವ ಬಗ್ಗೆ ಕಂಕನಾಡಿ ವೆಲೆನ್ಸಿಯಾ ಪರಿಸರದಲ್ಲಿ ಕಳೆದ 8 ದಿನಗಳಿಂದ ಒಂದು ಕೊಠಡಿಯಲ್ಲಿ ಪ್ರಾರಂಭಿಸಲಾಗಿದ್ದು, ಅದರಲ್ಲಿ ಸಂಗ್ರಹಗೊಂಡ ಸಾಮಗ್ರಿಗಳನ್ನು 3 ಕಂತುಗಳಲ್ಲಿ ಕರ್ನಾಟಕದ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಕಳುಹಿಸಿಕೊಡಲಾಯಿತು.
ವೆಲೆನ್ಸಿಯಾ ಚರ್ಚ್ ಧರ್ಮಗುರು ರೆ.ಫಾ.ಜೇಮ್ಸ್ ಡಿಸೋಜ ಮಾತನಾಡಿ, ಕಷ್ಟದಲ್ಲಿರುವವರಿಗೆ ಐವನ್ ಡಿಸೊಜ ಸದಾ ಏನಾದರೂ ಸಹಾಯ ಮಾಡುತ್ತಾ ಇರುತ್ತಾರೆ. ಇದರು ಅವರ ಶ್ರೀಮಂತ ಹೃದಯವಂತಿಕೆಯನ್ನು ತೋರಿಸುತ್ತದೆ ಎಂದರು.
ಮ್ಯಾಕೋ ಸೊಸೈಟಿಯ ಮೂಲಕ 10ಸಾವಿರ ರೂ.ನ ಚೆಕ್ನ್ನು ಹಾಗೂ ಐವನ್ ಡಿಸೋಜ ಅವರ ಒಂದು ತಿಂಗಳ ವೇತನವನ್ನು ಸಂತ್ರಸ್ತರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮೇಯರ್ ಭಾಸ್ಕರ್ ಕೆ., ಕಾರ್ಪೊರೇಟರ್ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಡಾ.ಕವಿತಾ ಐವನ್ ಡಿಸೋಜ, ಸಂಗ್ರಹಣಾ ಕೇಂದ್ರದ ಉಸ್ತುವಾರಿಗಳಾದ ಆನಂದ್ ಸೋನ್ಸ್, ಅನಿಲ್ ತೋರಸ್, ಗಂಗಾಧರ್ ಆರ್.ಕೆ., ಸಿರಿಲ್ ಡಿಸೋಜ, ಹಸನಬ್ಬ, ಮಾಜಿ ಕಾರ್ಪೊರೇಟರ್ ನಾಗೇಂದ್ರಕುಮಾರ್, ಮಹೇಶ್ ಕೋಡಿಕಲ್ ಮುಂತಾದವರು ಉಪಸ್ಥಿತರಿದ್ದರು.