ಕೇರಳ ಸಂತ್ರಸ್ತರಿಗೆ ಸಾಮಗ್ರಿಗಳ ರವಾನೆ
ಮಂಗಳೂರು, ಆ.28: ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೇರಳದ ಸಂತ್ರಸ್ತರಿಗೆ ಮಂಗಳೂರು ಮಹಾನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೇವಾ ಭಾರತಿಯ ಮೂಲಕ 1ಕೋಟಿಗೂ ಅಧಿಕ ಮೊತ್ತದ ದಿನಬಳಕೆಯ ವಸ್ತುಗಳ ಸಹಿತ ವಿವಿಧ ಸಾಮಗ್ರಿಗಳನ್ನು ಮಂಗಳವಾರ ರವಾನಿಸಿತು.
ಈ ಸಂದರ್ಭ ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಕಾರ್ಯದರ್ಶಿ ರಘುವೀರ್ ಕಾಮತ್, ವಿಶ್ವಸ್ಥ ಶ್ರೀನಿವಾಸ ಪ್ರಭು, ಆರೆಸೆಸ್ಸ್ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಮಹಾನಗರ ವ್ಯವಸ್ಥಾ ಪ್ರಮುಖ್ ಶಾಂತಾರಾಮ್ ಕೆ.ಎಂ., ಸಹ ಸಂಘ ಚಾಲಕ್ ಸುನಿಲ್ ಆಚಾರ್, ಸೇವಾಭಾರತಿಯ ಕಾರ್ಯಕರ್ತರಾದ ರಾಮರಾಯ ಕಾಮತ್, ದಿವಾಕರ ಭಟ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
Next Story