ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ವಿದ್ಯಾರ್ಥಿಗಳ ಕ್ಯಾಂಟೀನ್ ಉದ್ಘಾಟನೆ
ಮಂಗಳೂರು, ಆ. 29: ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಮತ್ತು ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಯ್ಯಿದ್ ಮದನಿ ಅರಬಿಕ್ ಶರೀಅತ್ ಕಾಲೇಜು, ಹಿಫ್ಲುಲ್ ಕುರ್ ಆನ್ ಕಾಲೇಜು, ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್, ವಿದ್ಯಾರ್ಥಿಗಳಿಗಾಗಿ ದರ್ಗಾ ವಠಾರದಲ್ಲಿ ನಿರ್ಮಿಸಿದ ಸುಸಜ್ಜಿತ ಕ್ಯಾಂಟೀನನ್ನು ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಉಸ್ಮಾನ್ ಎ. ಅವರು ಉದ್ಘಾಟಿಸಿದರು.
ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಸ್ವಾಗತಿಸಿದರು, ಸಯ್ಯಿದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಪ್ರಾಂಶುಪಾಲರಾದ ಇಬ್ರಾಹೀಮ್ ಅಹ್ಸನಿ ದುಆಗೈದರು, ಈ ಸಂದರ್ಭ ಹಿಪ್ಲುಲ್ ಕುರಾನ್ ಕಾಲೇಜು ಪ್ರಾಂಶುಪಾಲರಾದ ಹಾಫಿಲ್ ಝೈನ್ ಸಖಾಫಿ, ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಹಾಜಿ ಅಬ್ಬಾಸ್ ಪಿಲಾರ್, ಸದಸ್ಯರಾದ ಇಬ್ರಾಹೀಮ್ ಹಾಜಿ ಉಳ್ಳಾಲಬೈಲು, ಮಯ್ಯದ್ದಿ ಕೋಡಿ, ಮೊಹಿಯುದ್ದೀನ್ ಉಳ್ಳಾಲ್ ಬೈಲು, ಹನೀಫ್ ಕೋಡಿ, ಕಾದರ್ ಮುಸ್ಲಿಯಾರ್ ಅಕ್ಕರೆಕರೆ, ಹಸನ್ ಕೈಕೊ, ಅಬ್ದುಲ್ ಹಮೀದ್ ಅಳೇಕಲ, ಮತ್ತಿತರರು ಉಪಸ್ಥಿತರಿದ್ದರು.